HEALTH TIPS

ಮುಂಗಾರು ಪೂರ್ವ ಸ್ವಚ್ಛತೆಗೆ ಹಣ ನೀಡದೆ ಸಮಸ್ಯೆ

Top Post Ad

Click to join Samarasasudhi Official Whatsapp Group

Qries

                ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮುಂಗಾರು ಪೂರ್ವ ಸ್ವಚ್ಛತೆ ವಿಫಲವಾಗಿರುವುದು ಬೇಸಿಗೆ ಮಳೆಗೆ ಪ್ರವಾಹಕ್ಕೆ ಕಾರಣವಾಗಿದೆ ಎಂದು ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ತಿಳಿಸಿದ್ದಾರೆ.

             ಖಜಾನೆ ಖಾಲಿಯಾದ ಕಾರಣ ಸಕಾಲಕ್ಕೆ ಹಣ ಪಾವತಿಯಾಗಲಿಲ್ಲ. ಇದರಿಂದ ಪಾಲಿಕೆ, ನಗರಸಭೆ, ಗ್ರಾಮ ಪಂಚಾಯಿತಿಗಳಲ್ಲಿ ಮಳೆಗಾಲ ಪೂರ್ವ ಸ್ವಚ್ಛತೆ ಸ್ಥಗಿತಗೊಂಡಿದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯ ಇತ್ಯಾದಿಗಳು ಶೇಖರಣೆಗೊಂಡು ಚರಂಡಿಗಳಲ್ಲಿ ತುಂಬಿಕೊಂಡಿದೆ.  ಇವುಗಳ ವಿಲೇವಾರಿಗೆ ವಿಫಲವಾದ ಕಾರಣ ಬೇಸಿಗೆಯ ಮಳೆಯ ಸಮಯದಲ್ಲಿ ನಗರ ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು.

         ರಾಜ್ಯ ಸರ್ಕಾರ ಹಣ ನೀಡದ ಕಾರಣ ಹಿಂದಿನಂತೆ ಮಳೆಗಾಲಕ್ಕೂ ಮುನ್ನ ಚರಂಡಿ ಸ್ವಚ್ಛಗೊಳಿಸಲು ಸಾಧ್ಯವಾಗಿಲ್ಲ ಎಂದು ಜನಪ್ರತಿನಿಧಿಗಳು ಒಪ್ಪಿಕೊಳ್ಳುತ್ತಾರೆ. ಹಿಂದಿನ ವರ್ಷಗಳಲ್ಲಿ ಬೇಸಿಗೆಯ ಜೋರು ಮಳೆಗೆ ಮೊದಲು ಹೊಳೆ, ಹಳ್ಳಗಳಲ್ಲಿ ಮಣ್ಣು ತೆಗೆದು ಆಳವಾಗಿ ಸ್ವಚ್ಛಗೊಳಿಸುತ್ತಿದ್ದರು. ಈ ಬಾರಿ ಹಣ ಸಿಗದ ಕಾರಣ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಲವೆಡೆ ಪೂರ್ವಭಾವಿ ಕ್ರಮಗಳನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ. ವಾರ್ಡ್ ಮಟ್ಟದ ಸಮಿತಿಗಳೇ ಇಲ್ಲಿ ಕಾಮಗಾರಿ ನಡೆಸಲು ತಳಮಟ್ಟದಲ್ಲಿ ತೀರ್ಮಾನಿಸಬೇಕಿದೆ. ಹಣ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಪೂರ್ವಭಾವಿ ಚರ್ಚೆ ನಡೆಸಲಾಗಿದೆ.

           ನಗರಸಭೆಯ ವಾರ್ಡ್‍ಗಳಲ್ಲಿ 20,000 ರಿಂದ 25,000 ರೂಪಾಯಿಗಳು ಮತ್ತು ಪಂಚಾಯಿತಿ ವಾರ್ಡ್‍ಗಳಲ್ಲಿ 10,000 ರೂಪಾಯಿಗಳನ್ನು ಸ್ವಂತ ನಿಧಿಯಿಂದ ಖರ್ಚು ಮಾಡಬಹುದು. 10,000 ಸ್ವಚ್ಛತಾ ಆಯೋಗ ನೀಡಬೇಕು. ಈ ಮೊತ್ತ ಇನ್ನೂ ಅನುಮೋದನೆಗೊಂಡಿಲ್ಲ. 

            ಆದರೆ ಬಹುತೇಕ ಸ್ಥಳೀಯಾಡಳಿತ ಸಂಸ್ಥೆಗಳು ಸ್ವಂತ ನಿಧಿಯಲ್ಲಿ ಹಣ ಹೊಂದಿಲ್ಲ. ತಿರುವನಂತಪುರಂ ನಗರದಲ್ಲಿ ಸ್ವಂತ ನಿಧಿಯಿಂದ ಪ್ರತಿ ವಾರ್ಡ್‍ಗೆ ತಲಾ ಒಂದು ಲಕ್ಷ ಹಣ ಮಂಜೂರು ಮಾಡಿದ್ದು, ಹಣ ಬರಲು ವಿಳಂಬವಾದ ಕಾರಣ ಮಹಾಮಳೆಗೆ ನಗರ ನಲುಗಿ ಹೋಗಿದೆ. ಮುಖ್ಯ ಚರಂಡಿ, ಹೊಳೆಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗಿಲ್ಲ. ಇತರ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries