HEALTH TIPS

ದ್ವೇಷ ಭಾಷಣ: ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ: ವಿರೋಧ ಪಕ್ಷಗಳು

            ವದೆಹಲಿ: ಪ್ರಧಾನಿ ಅವರ 'ಅಲ್ಪಸಂಖ್ಯಾತರ ವಿರುದ್ಧ ನಾನು ಒಂದೂ ಮಾತು ಆಡಿಲ್ಲ' ಎಂಬ ಹೇಳಿಕೆಗೆ ತಿರುಗಿ ಬಿದ್ದಿರುವ ವಿರೋಧ ಪಕ್ಷಗಳ ಮುಖಂಡರು, ಪ್ರತಿಯೊಂದು ವೇದಿಕೆಯಲ್ಲೂ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುವ ಮೋದಿ ಅವರು ಹೇಳುತ್ತಿರುವುದು 'ಸುಳ್ಳು' ಎಂದು ಟೀಕಿಸಿದ್ದಾರೆ.

             'ಪ್ರಧಾನಿ ಹೇಳಿಕೆ ಸಂಪೂರ್ಣ ಸುಳ್ಳು. ಅವರು (ಬಿಜೆಪಿಯವರು) ಮುಸ್ಲಿಮರ ವಿರುದ್ಧ ಹೇಗೆ ಮಾತನಾಡುತ್ತಿದ್ದಾರೆ ಎಂಬುದು ಮೋದಿ ಅವರಿಗೆ ತಿಳಿದಿದೆ. ಮಂಗಳಸೂತ್ರ ಮತ್ತು ಹೆಚ್ಚು ಮಕ್ಕಳನ್ನು ಹೊಂದಿದವರು.. ಮುಂತಾದ ಹೇಳಿಕೆಗಳನ್ನು ಕೊಟ್ಟವರು ಯಾರು? ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು ತಮಗೆ ಸಿಗಬೇಕಾದ ಹಲವು ಹಕ್ಕುಗಳಿಂದ ವಂಚಿತರಾಗಿದ್ದಾರೆ' ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಪ್ರತಿಕ್ರಿಯಿಸಿದ್ದಾರೆ.

                   ಬಿಜೆಪಿ-ಆರ್‌ಎಸ್‌ಎಸ್‌ನವರು ಅಲ್ಪಸಂಖ್ಯಾತರನ್ನು ದುರ್ಬಲಗೊಳಿಸುವ ಮತ್ತು ಅವರನ್ನು ಅಪಹಾಸ್ಯಕ್ಕೆ ಗುರಿಪಡಿಸುವ 'ದುಷ್ಟ ಯೋಜನೆ'ಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದ್ದಾರೆ.

             'ಪ್ರಧಾನಿ ಅವರು ಹಿಂದೂ-ಮುಸ್ಲಿಮರ ಮಧ್ಯೆ ಮಾತ್ರವಲ್ಲ, ಹಿಂದೂಗಳು ಪರಸ್ಪರ ಕಚ್ಚಾಡುವಂತೆ ಮಾಡುತ್ತಿದ್ದಾರೆ. ಮೊದಲು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಾರೆ. ಆ ಬಳಿಕ ಹಿಂದೂಗಳು ಸಿಖ್, ಕ್ರೈಸ್ತ ಮತ್ತು ಬೌದ್ಧರ ವಿರುದ್ದ ಜಗಳವಾಡುವಂತೆ ಮಾಡುವರು. ಅದೇ ರೀತಿ ಮರಾಠರು ಮರಾಠಯೇತರರ ವಿರುದ್ಧ, ದಲಿತರು ಇತರ ಹಿಂದುಳಿದ ವರ್ಗದವರ ವಿರುದ್ಧ ಕಚ್ಚಾಡುವ ಹಾಗೆ ಮಾಡುವರು' ಎಂದು ಎಎಪಿ ಸಂಸದ ಸಂಜಯ್‌ ಸಿಂಗ್‌ ದೂರಿದ್ದಾರೆ.

                ಬಿಜೆಪಿ ಸಮರ್ಥನೆ: ಪ್ರಧಾನಿ ಅವರ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. 'ಮೋದಿ ಅವರು ಸತ್ಯವನ್ನೇ ಹೇಳಿದ್ದಾರೆ. ಅವರ ಎಲ್ಲ ನೀತಿಗಳು ಬಡವರ ಪರವಾಗಿದ್ದು, ಎಲ್ಲರಿಗೂ ಪ್ರಯೋಜನ ನೀಡಿವೆ' ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಪ್ರತಿಕ್ರಿಯಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries