HEALTH TIPS

ರಂಗ ಚಿನ್ನಾರಿಯಿಂದ ಬೆಂಗಳೂರಿನಲ್ಲಿ ಎರಡು ನಾಟಕಗಳ ಪ್ರದರ್ಶನ

                ಕಾಸರಗೋಡು: ರಂಗ ಮಂದಿರ ಬೆಂಗಳೂರು ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ರಂಗ ಚಿನ್ನಾರಿ ಕಾಸರಗೋಡು(ರಿ)ಅಭಿನಯಿಸುವ ಎರಡು ನಾಟಕಗಳ ಪ್ರದರ್ಶನ ಜೂನ್ 1ರಂದು ಸಂಜೆ 5ಕ್ಕೆ ಬೆಂಗಳೂರು ಜೆ.ಸಿ ರಸ್ತೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ.

           ಮಲಯಾಳಂನ ಎನ್.ಎನ್ ಪಿಳ್ಳೈ ಅವರ ಮೂಲ ರಚನೆಯ ಭಾಷಾಂತರಿತ ನಾಟಕ 'ಒಬ್ಬ ಇನ್ನೊಬ್ಬ' ಹಾಗೂ ಪಿ. ಲಂಕೇಶ್ ಅವರ 'ಸಿದ್ಧತೆ'ನಾಟಕಗಳ ಪ್ರದರ್ಶನ ನಡೆಯುವುದು. ಕಾಸರಗೋಡು ಚಿನ್ನಾ ಮಲಯಾಳ ನಾಟಕ ಭಾಷಾಂತರಿಸಿ, ರಂಗ ಸಜ್ಜಿಕೆಯೊಂದಿಗೆ ಎರಡೂ ನಾಟಕಗಳನ್ನು ನಿರ್ದೇಶಿಸಲಿದ್ದಾರೆ. 

             ಈ ಸಂದರ್ಭ ನಡೆಯುವ ಸಮಾರಂಭದಲ್ಲಿ ಚಲನಚಿತ್ರ ನಟ ಸುಂದರ್‍ರಾಜ್  ಉದ್ಘಾಟಿಸುವರು. ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ಅಧ್ಯಕ್ಷತೆ ವಹಿಸುವರು. ರಂಗ ಚಿನ್ನಾರಿ ನಿರ್ದೇಶಕ, ಚಿತ್ರ ನಟ ಕಾಸರಗೋಡು ಚಿನ್ನಾ ಗೌರವ ಉಪಸ್ಥಿತರಿರುವರು. ನಾಟಕಕಾರ ಡ. ನಾ.ದಾ ಶೆಟ್ಟಿ, ರಂಗ ಮಂದಿರ ಗೌರವಾಧ್ಯಕ್ಷ ಆರ್.ಕೆ ಹೆಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಅವಿರತ ಹರೀಶ್, ನಯನರಾಜು ಹಾಗೂ ಎಸ್. ತಿಮ್ಮಯ್ಯ ಅವರಿಗೆ ರಂಗ ಗೌರವ ಸಲ್ಲಿಸಲಾಗುವುದು. ಈ ಸಂದರ್ಭ ಡಾ. ಡಿ.ಕೆ ಚೌಟರ ನೆನಪು ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಶಶಿಧರ ಅಡಪ, ರಂಗ ಸಂಘಟಕ ಆರ್. ನರೇಂದ್ರ ಬಾಬು ಮಾತನಾಡುವರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries