ಮುಳ್ಳೇರಿಯ: ಸ್ನಾನಕ್ಕಾಗಿ ಹೊಳೆಗಿಳಿದಿದ್ದ ಆದೂರು ಮಞಂಪಾರೆ ನಿವಾಸಿ ಮಹಹಮ್ಮದ್-ದೈನಾಬಿ ದಂಪತಿ ಪುತ್ರ ಇಲ್ಯಾಸ್(31)ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಞಂಪಾರೆಯ ಮೇತುಂಗಾಲ್ ಕಡವು ಎಂಬಲ್ಲಿ ಸ್ನಾನಕ್ಕಿಳಿದಿದ್ದ ವೇಳೆ ನೀರಲ್ಲಿ ಮುಳುಗಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಹುಡುಕಾಟ ನಡೆಸಿ, ಇಲ್ಯಾಸ್ ಅವರನ್ನು ನೀರಿಂದ ಮೇಲಕ್ಕೆತ್ತಿದ್ದರೂ, ಸಾವು ಸಂಭವಿಸಿತ್ತು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.