ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇರಳರಾಜ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ 'ಎ' ಪ್ಲಸ್ ಗ್ರೇಡ್ ಗಳಿಸಿದ ಕೂಡ್ಲು ಶಿವಮಂಗಲದ ಕುಮಾರಿ ವೈಷ್ಣವಿ ಕೆ ಹಾಗೂ ಕೇರಳ ರಾಜ್ಯ ಎಲ್ ಎಸ್ ಎಸ್ ಸ್ಕಾಲರ್ ಶಿಫ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕೂಡ್ಲು ಶ್ರೀ ಗೋಪಲಕೃಷ್ಣ ಪ್ರೌಢಶಾಲೆಯ ಸಾತ್ವಿಕ್ ಪಿ ಕೆ, ವೈಷ್ಣವ್ ಎಚ್, ಭವಿಷ್ಯಲಕ್ಷ್ಮಿ ಎನ್ ಅವರನ್ನು ಶಿವಮಂಗಲ ಪ್ರೆಂಡ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಕ್ಲಬ್ ಅಧ್ಯಕ್ಷ ಸನತ್ ವಿಜೇತರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.