HEALTH TIPS

ಚಂಡೀಗಢ: ಅಂಗಾಂಗ ದಾನ, ಮೂವರು ಸೈನಿಕರಿಗೆ ಮರುಜೀವ

             ಚಂಡೀಗಢ: ಮಿದುಳು ನಿಷ್ಕ್ರಿಯಗೊಂಡಿದ್ದ ನಿವೃತ್ತ ಸುಬೇದಾರ್‌ ಅವರ ಅಂಗಾಂಗ ದಾನಕ್ಕೆ ಅವರ ಕುಟುಂಬಸ್ಥರು ನಿರ್ಧರಿಸಿದ ಪರಿಣಾಮ ಅನಾರೋಗ್ಯಕ್ಕೆ ಒಳಗಾಗಿದ್ದ ಮೂವರು ಸೈನಿಕರು ಮರುಜೀವ ಪಡೆದಿದ್ದಾರೆ.

              ಸುಬೇದಾರ್‌ ಅವರು ಮಂಗಳವಾರ ನಿಧನರಾದ ನಂತರ ಅವರ ಅಂಗಾಂಗಗಳನ್ನು ಭಾರತೀಯ ವಾಯುಪಡೆಯು ದೆಹಲಿಯ ಸೇನಾ ಆಸ್ಪತ್ರೆಗೆ ಸಾಗಿಸಿತು.

            ಸುಬೇದಾರ್ ಅವರು 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದರು.

            'ಆಘಾತಕ್ಕೆ ಒಳಗಾಗಿ ಸುಬೇದಾರ್ ಅವರ ಮಿದುಳು ನಿಷ್ಕ್ರಿಯವಾಗಿತ್ತು. ಅವರ ಕುಟುಂಬಸ್ಥರು ಮೂತ್ರಪಿಂಡ, ಕಾರ್ನಿಯಾ ಮತ್ತು ಯಕೃತ್‌ ದಾನ ಮಾಡಲು ನಿರ್ಧರಿಸಿದರು. ಇದರಿಂದ ಮೂವರು ಸೈನಿಕರಿಗೆ ಮರುಜೀವ ಬಂದಂತಾಗಿದೆ' ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಮೂಲಕ ಅಂಗಾಂಗಗಳನ್ನು ದೆಹಲಿಯ ಸೇನಾ ಆಸ್ಪತ್ರೆಗೆ ಒಂದು ಗಂಟೆಯ ಒಳಗಾಗಿ ಸಾಗಿಸಲಾಯಿತು ಎಂದು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries