ತಿರುವನಂತಪುರ: ಬಿರುಸುಗೊಂಡು ಅವ್ಯಾಹತವಾಗಿ ಹಲವೆಡೆ ಮಳೆ ಸುರಿಯುತ್ತಿರುವ ಕಾರಣ ಸ್ಥಳೀಯಾಡಳಿತ ಇಲಾಖೆಯ ನೇತೃತ್ವದಲ್ಲಿ ನಿಯಂತ್ರಣ ಕೊಠಡಿ ಕಾರ್ಯಾರಂಭ ಮಾಡಿದೆ. ರಾಜ್ಯದಲ್ಲಿ ಮಳೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಕಂಟ್ರೋಲ್ ರೂಂ ಕಾರ್ಯಾಚರಣೆ ಆರಂಭಿಸಲಾಗಿದೆ.
ನಿಯಂತ್ರಣ ಕೊಠಡಿ ತಿರುವನಂತಪುರಂ ಪ್ರಧಾನ ನಿರ್ದೇಶನಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ದಿನದ 24 ಗಂಟೆಯೂ ಕಂಟ್ರೋಲ್ ರೂಂ ಸೇವೆ ಲಭ್ಯವಿರಲಿದೆ. ಸಂಪರ್ಕ ಸಂಖ್ಯೆ 0471 2317 214.
ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ಮಳೆಯ ನಂತರ ಉಂಟಾಗಿರುವ ಜಲಾವೃತಗಳು, ಹಠಾತ್ ಸಾಂಕ್ರಾಮಿಕ ರೋಗಗಳು ಮತ್ತು ಇತರ ತೊಂದರೆಗಳ ಬಗ್ಗೆ ಮಾಹಿತಿ ನೀಡಬಹುದು. ಸ್ಥಳೀಯ ಸ್ವ-ಸರ್ಕಾರ ಇಲಾಖೆಯ ಪ್ರಧಾನ ನಿರ್ದೇಶಕ ಎಂ.ಜಿ. ರಾಜಮಾಣಿಕ್ಯ ಮಾಹಿತಿ ನೀಡಿದರು.