HEALTH TIPS

ಸಮುದ್ರದ ಪ್ರಕ್ಷುಬ್ದ ವಿದ್ಯಮಾನ; ಕೇರಳ ಕರಾವಳಿಯಲ್ಲಿ ಎಚ್ಚರಿಕೆ; ಉಬ್ಬರವಿಳಿತ ಹೆಚ್ಚಳ ಸಾಧ್ಯತೆ

                ತಿರುವನಂತಪುರಂ: ಸಮುದ್ರ ಪ್ರಕ್ಷುಬ್ದತೆಯ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಇಂದು (13-05-2024) ಕೇರಳ ಕರಾವಳಿಯಲ್ಲಿ ಬೆಳಿಗ್ಗೆ 11.30 ರಿಂದ ರಾತ್ರಿ 11.30 ರವರೆಗೆ  0.5 ರಿಂದ 1.2 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಶೋಧನಾ ಕೇಂದ್ರ (ಐ.ಎನ್.ಸಿ.ಒ,ಐ ಎಸ್) ತಿಳಿಸಿದೆ. 

               ಇದರ ವೇಗವು ಪ್ರತಿ ಸೆಕೆಂಡಿಗೆ 20 ಸೆಂಟಿಮೀಟರ್‍ಗಳಿಂದ 50 ಸೆಂಟಿಮೀಟರ್‍ಗಳ ನಡುವೆ ಬದಲಾಗುವ ಸಾಧ್ಯತೆಯಿದೆ ಎಂದು ಅಧಿಸೂಚನೆ ತಿಳಿಸಿದೆ.

           ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರದಿಂದಿರಲು ವಿಶೇಷವಾಗಿ ಸೂಚಿಸಲಾಗಿದೆ.

1. ಸಮುದ್ರದ ಪ್ರಕ್ಷುಬ್ಧತೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ, ಅಧಿಕಾರಿಗಳ ಸೂಚನೆಯಂತೆ ಅಪಾಯದ ಪ್ರದೇಶಗಳಿಂದ ದೂರವಿರಬೇಕು.

2. ಮೀನುಗಾರಿಕಾ ಹಡಗುಗಳನ್ನು (ದೋಣಿಗಳು, ಸಣ್ಣ ಹಡಗು ಇತ್ಯಾದಿ) ಸುರಕ್ಷಿತವಾಗಿ ಬಂದರಿನಲ್ಲಿ ಇರಿಸಬೇಕು. ದೋಣಿಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದರಿಂದ ಘರ್ಷಣೆಯ ಅಪಾಯವನ್ನು ತಪ್ಪಿಸಬಹುದು. ಮೀನುಗಾರಿಕೆ ಉಪಕರಣಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು.

3. ಕಡಲತೀರದ ಪ್ರವಾಸಗಳು ಮತ್ತು ಸಮುದ್ರದಲ್ಲಿನ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು.

              ಈ ಮಧ್ಯೆ ಮುಂದಿನ ಗಂಟೆಗಳಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ಅಲ್ಲಲ್ಲಿ  ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಪ್ರಕಟಿಸಿದೆ.

          ಇದೇ ವೇಳೆ ಕೇಂದ್ರ ಹವಾಮಾನ ಇಲಾಖೆ ಕೂಡ ಇದೇ 16ರವರೆಗೆ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್. 14 ರಂದು ತಿರುವನಂತಪುರಂ, ಪತ್ತನಂತಿಟ್ಟ. 15 ರಂದು ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟ ಹಾಗೂ  16 ರಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries