ತಿರುವನಂತಪುರಂ: ಪ್ಲಸ್ ಒನ್ ಪ್ರವೇಶಕ್ಕೆ ಪ್ರಾಯೋಗಿಕ ಹಂಚಿಕೆ ಇಂದು ಬುಧವಾರ ಪ್ರಕಟವಾಗಲಿದೆ. ಇದಾದ ನಂತರ ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಲು ಅವಕಾಶ ನೀಡಲಾಗುವುದು.
ಆಯ್ಕೆಮಾಡಿದ ಶಾಲೆಗಳು ಮತ್ತು ವಿಷಯ ಸಂಯೋಜನೆಗಳು ಸೇರಿದಂತೆ ವಿಷಯಗಳನ್ನು ಈ ಹಂತದಲ್ಲಿ ಬದಲಾಯಿಸಬಹುದು.
ಇದಾದ ನಂತರ ಜೂನ್ 5 ರಂದು ಮೊದಲ ಹಂಚಿಕೆ ಪ್ರಕಟವಾಗಲಿದೆ. ಈ ವರ್ಷ 4,65,960 ಮಂದಿ ಏಕಗವಾಕ್ಷಿ ಮೂಲಕ ಪ್ಲಸ್ ಒನ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ 20473ಮಂದಿ ಎಸ್ಸೆಸೆಲ್ಸಿ ಉತ್ತೀರ್ಣರಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆದುಕೊಮಡಿದ್ದಾರೆ. ಇವರಲ್ಲಿ 10649ಮಂದಿ ಬಾಲಕರು ಹಾಗೂ 9824ಮಂದಿ ಬಾಲಕಿಯರಾಗಿದ್ದಾರೆ.
ಪ್ಲಸ್ವನ್ ಸೀಟುಗಳ ಸಂಖ್ಯೆ 18505ಮಾತ್ರ ಇದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಸೀಟು ಲಭ್ಯವಾಗುವುದು ಸಂಶಯ. ಸರ್ಕಾರಿ ಶಾಲೆಗಳಲ್ಲಿ 11780, ಅನುದಾನಿತ ಶಾಲೆಗಳಲ್ಲಿ 4825ಹಾಗೂ ಅನುದಾನ ರಹಿತ ಶಾಲೆಗಳು 2100ಸೀಟುಗಳನ್ನು ಹೊಂದಿದೆ. ಎಸ್ಸೆಸೆಲ್ಸಿ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳೂ ಜಿಲ್ಲೆಯೊಳಗೇ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಸುಮಾರು ಎರಡು ಸಆವಿರ ಸೀಟುಗಳ ಕೊರತೆ ಎದುರಾಗಲಿದೆ.
ಜಿಲ್ಲೆಯ ಹೈಯರ್ಸೆಕೆಂಡರಿ ಶಾಲೆಗಳಲ್ಲಿ ಪ್ಲಸ್ವನ್ ಸೀಟುಗಳ ಕೊರತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಪ್ರತಿಪಕ್ಷ ಪೋಷಕ ವಿದ್ಯಾರ್ಥಿ ಸಂಗಟನೆಗಳು ಈಗಾಗಲೇ ಪ್ರತಿಭಟನೆಗೂ ಮುಂದಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಆರ್ಥಿಕ ಸಂದಿಗ್ಧತೆ ಉಂಟಾಗದ ರೀತಿಯಲ್ಲಿ ಶೇ. 30, ಅನುದನಿತ ಶಾಲೆಗಳಲ್ಲಿ ಶೇ. 20 ಸೀಟು ಹೆಚ್ಚಳಗೊಳಿಸುವುದಾಗಿ ಸರ್ಕಾರ ಹೇಳಿಕೊಮಡು ಬರುತ್ತಿದ್ದರೂ, ಬ್ಯಾಚುಗಳ ಸಂಖ್ಯೆ ಹೆಚ್ಚಿಸದೆ, ಕೇವಲ ಸೀಟು ಹೆಚ್ಚಳದಿಂದ ಪ್ರಯೋಜನವಾಗದು ಎಂಬುದಾಗಿ ವಿದ್ಯಾರ್ಥಿ ಸಂಘಟನೆಗಳು ಅಭಿಪಾಯಪಟ್ಟಿದೆ.