HEALTH TIPS

ಅಬಕಾರಿ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು: ವಿರೋಧ ಪಕ್ಷದ ನಾಯಕ

             ಕೊಚ್ಚಿ: ಮದ್ಯದ ನೀತಿ ಬದಲಿಸಲು ಕೋಟಿಗಟ್ಟಲೆ ಭ್ರಷಾಚಾರ ನಡೆಯುತ್ತಿದ್ದು, ಇದು ಸರ್ಕಾರದ ಅರಿವಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

            ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಬಾರ್ ಮಾಲೀಕರಿಂದ ಕೋಟಿಗಟ್ಟಲೆ ವಸೂಲಿ ಮಾಡುವ ಸರ್ಕಾರದ ನಡೆ ಬಾರ್ ಮಾಲೀಕರ ಮೂಲಕವೇ ಹೊರಬಿದ್ದಿದೆ. ರಾಜ್ಯದ 801 ಬಾರ್‍ಗಳಿಂದ ತಲಾ 2.5 ಲಕ್ಷ ರೂಪಾಯಿ ವಸೂಲಿ ಮಾಡಿ 20 ಕೋಟಿ ರೂಪಾಯಿ ಲಂಚದ ವ್ಯವಹಾರ ಇದರ ಹಿಂದೆ ನಡೆದಿದೆ. ಚುನಾವಣಾ ನೀತಿ ಸಂಹಿತೆ ತೆರವಾದ ಕೂಡಲೇ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿ ಬಾರ್ ಮಾಲೀಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಅಬಕಾರಿ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿ.ಡಿ.ಸತೀಶನ್ ತಿಳಿಸಿರುವರು.

           ಲಂಚದ ವ್ಯವಹಾರ ನಡೆದಿರುವ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಹೊರಬಿದ್ದಿವೆ. ಚುನಾವಣೆಯ ನಂತರ ಹೊಸ ಮದ್ಯ ನೀತಿ, ಡ್ರೈ ಡೇ ತೆರವು ಸೇರಿದಂತೆ ಬದಲಾವಣೆಗಳು ಬರಲಿದ್ದು, ಅದಕ್ಕಾಗಿ ಕೊಡಬೇಕಾದ ಹಣ ಕೊಡಬೇಕು ಎನ್ನುತ್ತಾರೆ ಬಾರ್ ಮಾಲೀಕರ ಇಡುಕ್ಕಿ ಜಿಲ್ಲಾಧ್ಯಕ್ಷ. ರಾಜ್ಯ ಸಮಿತಿಯ ಸೂಚನೆಯಂತೆ ಈ ನಿರ್ಧಾರ ತಿಳಿಸಲಾಗಿದೆ ಎಂದೂ ಧ್ವನಿ ಸಂದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆಯೇ ಹಣ ವಸೂಲಿ ಆರಂಭಿಸಿದ್ದರೂ ಎಲ್ಲರೂ ನೀಡುತ್ತಿಲ್ಲ ಎಂದು ಜಿಲ್ಲಾಧ್ಯಕ್ಷರು ದೂರನ್ನು ಹಂಚಿಕೊಂಡಿದ್ದಾರೆ. ಕೆ.ಎಂ.ಮಣಿ ವಿರುದ್ಧ 1 ಕೋಟಿ ಆರೋಪ ಮಾಡಿದವರು ಈಗ 801 ಬಾರ್ ಗಳಿಂದ 20 ಕೋಟಿ ವಸೂಲಿ ಮಾಡುತ್ತಿದ್ದಾರೆ.

             ನೋಟು ಎಣಿಸುವ ಯಂತ್ರ ಈಗ ಎಲ್ಲಿದೆ? ಅಬಕಾರಿ ಸಚಿವರ ಬಳಿಯೋ, ಮುಖ್ಯಮಂತ್ರಿ ಬಳಿಯೋ ಅಥವಾ ಎಕೆಜಿ ಸೆಂಟರ್ ಬಳಿಯೋ ಎಂಬುದನ್ನು ನಿರ್ದಿಷ್ಟಪಡಿಸಿದರೆ ಸಾಕು ಎಂದು ಸತೀಶನ್ ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries