HEALTH TIPS

'ನನ್ನೆ'ಡೆಗೆ ತೋರಿದ ಮಹಾ ಪುರುಷ: ಶ್ರೀಶಂಕರ

 ಅಹಂ ಬ್ರಹ್ಮಾಸ್ಮಿ ,ನಾನು ಬ್ರಹ್ಮ ,ನೀನೂ ಬ್ರಹ್ಮ ಈ ಜಗತ್ತಿನ ಸರ್ವಸೃಷ್ಟಿಯೂ ಬ್ರಹ್ಮನದೇ , ನಾನು ಬೇರೆಯಲ್ಲ ನೀನು ಬೇರೆಯಲ್ಲಾ...  ಈ ವಿಶ್ವಸೃಷ್ಟಿ ಬೇರೆಯಲ್ಲ .. ಇಲ್ಲಿ ಬಣ್ಣ, ಜಾತಿ ,ಮತ ,ಪಂಥಗಳು, ಇವೆಲ್ಲ ನಮ್ಮ ಭ್ರಮೆಯೇ ಒರೆತು ಇವ್ಯಾವೂ ನಿಜವಲ್ಲ.. ಜಗತ್ತಿನ ಪ್ರತಿಸೃಷ್ಟಿಯನ್ನು ಬ್ರಹ್ಮಚೈತನ್ಯವೇ ತುಂಬಿರುವಾಗ ಅವನು ಬೇರೆ ನಾನು ಬೇರೆ ಹೇಗಾಗುವುದಕ್ಕೆ ಸಾಧ್ಯ...  ಇಂಥದ್ದೊಂದು ಪ್ರಶ್ನೆಯ ಮೂಲಕ ಜಗತ್ತಿಗೆ ಅತ್ಯದ್ಭುತವಾದ ಏಕತ್ವವನ್ನು ಜಾತಿ ಪಂಥಗಳನ್ನು ಮೀರಿದ ಸಮಾನತೆಯ ತತ್ತ್ವವನ್ನು ಬೋಧಿಸಿದರು ಆದಿಶಂಕರಾಚಾರ್ಯರು... 

ಕೇವಲ ಮೂವತ್ತೆರಡು ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ದೇಶದಾದ್ಯಂತ ಪರ್ಯಟನೆ ಮಾಡಿ ಹಲವಾರು ಕ್ಷೇತ್ರಗಳನ್ನು ಸ್ಥಾಪಿಸಿದ , ಅವತ್ತು ದೇಶವನ್ನು ಆವರಿಸಿಕೊಂಡಿದ್ದ ಇಲ್ಲಿನ ಮನಸ್ಸುಗಳನ್ನು ಆಳ್ತಾಇದ್ದ ಮೌಢ್ಯಗಳ ವಿರುದ್ಧ ಜಾಗೃತಿಯನ್ನ ಮೂಡಿಸುವ  ಶಂಕರರ ಬಗ್ಗೆ ಸಣ್ಣ ಲೇಖನದಲ್ಲಿ ಒಂದಷ್ಟು ಮಾತುಗಳಲ್ಲಿ ಹೇಳಿಬಿಡೋದು ತುಂಬಾನೇ ಕಷ್ಟ...  ಇವತ್ತು ಶಂಕರನ್ನ ಅವರ  ತತ್ವಗಳನ್ನು ಅರ್ಥಮಾಡಿಕೊಂಡಿರಿರುವರಿಗಿಂತಲೂ  ಹೆಚ್ಚು ಅಪಾರ್ಥಮಾಡಿಕೊಂಡವರೇ ಹೆಚ್ಚು...  ಯಾವ ಆದಿಶಂಕರರು ಮೌಡ್ಯದ ವಿರುದ್ದ, ಜಾತಿ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ತಮ್ಮಿಡೀ ಜೀವನವನ್ನು ಮುಡಿಪಾಗಿಟ್ಟರೋ ಅದೇ ಶಂಕರರನ್ನ ನಿಂದನೆ ಮಾಡುವುದು ಮತ್ತು ಅವರ ಸಾಧನೆಗಳ ಮೇಲೆ ತೆರೆ ಎಳೆಯೋ ಪ್ರಯತ್ನ ನಡೆದದ್ದು ಇನ್ನೂ ದುರಂತ..  

ಶಂಕರರ ತತ್ವಗಳು ಅವರ ಸಾಧನೆಗಳು ನಮಗೆ ಸ್ವಲ್ಪವಾದರೂ ಅರ್ಥ ಆಗಬೇಕು ಅಂದ್ರೆ ಅವರ ಕಾಲಘಟ್ಟದ ಇತಿಹಾಸವನ್ನು ಕೂಡ ನಾವು ಗಮನಿಸಬೇಕಾಗುತ್ತೆ..  ಅದು ನಮ್ಮ ನಾಗರಿಕತೆಯಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತಿದ್ದ  ಕಾಲ..  ಒಂದ್ಕಡೆ ದೇಶ ಪರಕೀಯರ ದಾಳಿಗಳನ್ನ ಎದುರಿಸ್ತಾ ಇತ್ತು...  ಮತ್ತೊಂದ್ಕಡೆ ಒಳಗೊಳಗೇ ಅಂತಃಕಲಹಗಳು ಶುರುವಾಗಿದ್ದವು...  ಅಕ್ಕಪಕ್ಕದ ನಾಗರಿಕತೆಗಳು ಭಾರತದ ಮೇಲೆ ದಾಳಿ ಮಾಡುವುದಕ್ಕೆ ಹೊಂಚಿ ಕೂತಿದ್ದವು...  ಮತ್ತೊಂದ್ಕಡೆ ದೇಶದ ಒಳಗೆ ಜಾತಿ ಮತ ಪಂಥಗಳ ಹೆಸ್ರಲ್ಲಿ ಜನ ಬೆರೆಯಾಗ ತೊಡಗಿದ್ರು..  ಸನಾತನ ಧರ್ಮ ಸಂಸ್ಕೃತಿಗಳು ತಮ್ಮ ಪ್ರಭೆಯನ್ನ ಕಳೆದುಕೊಳ್ತಾ ಇದ್ವು..   ತಾಂತ್ರಿಕ ಸಿದ್ಧಿಗಾಗಿ ನರಬಲಿಯಂಥ ಆಚರಣೆಗಳು ಆರಂಭವಾಗಿತ್ತು..ಒಂದುಕಡೆ ಅಸ್ಪೃಶ್ಯತೆಯ ಮೌಢ್ಯ.. ಇನ್ನೊಂದು ಕಡೆ ಜಾತಿಗಳ ಹುಚ್ಚು.. ಆಧ್ಯಾತ್ಮ ಜ್ಞಾನದಿಂದ ವಂಚಿತರಾದವರು..  ತಾಂತ್ರಿಕ ಆಚರಣೆಗಳು,  ಸ್ಮಶಾನ ಪೂಜೆಗಳು ನರಬಲಿಯಂತಹ ಮೌಢ್ಯಗಳಲ್ಲಿ ಸಿಲುಕಿಕೊಳ್ಳುತ್ತಿದ್ದ ಕಾಲಘಟ್ಟ ಅದು.. ಇನ್ನೊಂದು ಕಡೆ ಇದೆಲ್ಲವನ್ನೂ ತಡಿಬೇಕು ಅನ್ನೋ ಮನಸ್ಸಿದ್ದರೂ ಕೂಡ ನಮ್ಮ ಕೆಲಸ ಅಲ್ಲಾ  ಧರ್ಮ ವನ್ನ  ಕಾಪಾಡುವಿಕೆ ನಾನು ಮತ್ತೆ ಮತ್ತೆ ಹುಟ್ಟಿ ಬರುತ್ತೇನೆ..  ಅಂತಾ ಶ್ರೀಕೃಷ್ಣ ಹೇಳ್ಬಿಟ್ಟಿದಾನೆ ಬೇಕಾದ್ರೆ ಅವನು ಹುಟ್ಟಿಬಂದು ಕಾಪಾಡ್ತುಕೊಳ್ಳಿ ಅನ್ನೋ ಮನಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತು ಭ್ರಮೆಯಿಂದ ಕೈಕಟ್ಟಿ ಕುಳಿತಿದ್ದ ಸಮಾಜ.. 

ಇಂಥಾ ಕಗ್ಗತ್ತಲ ಸಮಯದಲ್ಲಿ ಶಂಕರರ ಉದಯವಾಯ್ತು... ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ ಶಂಕರರು ದೇಶ ಪರ್ಯಟನೆಗೆ ಮುಂದಾದ್ರು... ಸನಾತನ ಧರ್ಮ ಮೇಲೆ ಆವರಿಸಿಕೊಂಡಿದ್ದ ಮೌಢ್ಯದ ಮುಸುಕನ್ನು ತೆಗೆದು ಹಾಕೊದಕ್ಕೆ ಪ್ರಯತ್ನಿಸಿದ್ರು.. ಜಾತಿಯನ್ನು ಮೀರಿ ಸಮಾಜದ ಪ್ರತಿಯೊಬ್ಬರೂ ಬ್ರಹ್ಮ ಸ್ವರೂಪವೇ ಅನ್ನೋದನ್ನ ಜಗತ್ತಿಗೆ ತಿಳಿಸೋದಕ್ಕೆ ಅವ್ರು ಕಾಶಿಯ ಸ್ಮಶಾನಘಟ್ಟದ ಕಾವಲುಗಾರನ ಕಾಲಿಗೆ ನಮಸ್ಕರಿಸಿದ ಘಟನೆಗಿಂತ ಮತ್ತಿನ್ಯಾವ ಉದಾಹರಣೆ ಬೇಕು..  ಜ್ಞಾನದ ಮದ  ತಲೆಗೇರಿಸಿಕೊಂಡ ಪಂಡಿತೋತ್ತಮರ ಎದುರು ಯುವ ಸನ್ಯಾಸಿ ಸ್ಮಶಾನದ ಕಾವಲುಗಾರ ಕಾಲಿಗೆ ನಮಸ್ಕರಿಸಿ ಅವ್ರನ್ನ ಶಿವ ಅಂತ ಗೌರವಿಸಿದ್ದು ಅಲ್ಲಿನ ಸಾಕಷ್ಟು ಜನರ ಕಣ್ಣುತೆರೆಸಿತ್ತಾ..  ಅವರಲ್ಲಿನ ಅಜ್ಞಾನ , ಜಾತಿಯ ಕೊಳಕನ್ನು ತೊಳೆದು ಹಾಕೋದ್ರಲ್ಲಿ ಸ್ವಲ್ಪಮಟ್ಟಿಗಾದರೂ ಅದು ಯಶಸ್ವಿಯಾಯಿತಾ  ಆಗಿದ್ದಿರಬಹುದು.. ಇನ್ನು ಶಂಕರರ ಬಗ್ಗೆ ಹೇಳುವ ಮತ್ತೊಂದು ಅತ್ಯದ್ಭುತ ಮತ್ತು ಸ್ವಾರಸ್ಯಕರ ವಿಷಯ ಅಂದ್ರೆ ಅವ್ರು ದೇವತೆಗಳ ಉಗ್ರಸ್ವರೂಪವನ್ನು ಕಡಿಮೆಮಾಡಿದ್ರೂ ಮತ್ತು ಶ್ರೀ ಚಕ್ರಗಳನ್ನು ದೇವಿ ಮಂದಿರಗಳಲ್ಲಿ ಸ್ಥಾಪಿಸಿದರು ಅನ್ನುವುದು... 

ಹೀಗೆ ಮೌಢ್ಯಗಳ ವಿರುದ್ಧ ಹೋರಾಡುತ್ತಲೇ ಶಂಕರರು #ಅಹಂ_ಬ್ರಹ್ಮಾಸ್ಮಿ ಯನ್ನು ಅತ್ಯದ್ಭುತವಾದ ಮತ್ತು ಸರ್ವಕಾಲಿಕ ಸತ್ಯವನ್ನು ಜಗತ್ತಿಗೆ ಹೇಳುವ ಮೂಲಕ ಒಗ್ಗಟ್ಟಿನ ಮಂತ್ರವನ್ನು ಭೋದಿಸಿದ್ರು... 

 ನೀವು ಇವತ್ತು ಜಗತ್ತಿನ ಪರಿಸ್ಥಿತಿಯನ್ನು ಒಂದುಸಾರಿ ನೋಡಿ ಜಾತಿಯ ಹೆಸರಲ್ಲಿ ಪಂಥಗಳ ಹೆಸ್ರಲ್ಲಿ ಭಾಷೆ ದೇಶಗಳ ಹೆಸ್ರಲ್ಲಿ ಇಡೀ ಜಗತ್ತು ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುದಿಕೆ ಕಾತರಿಸಿ ಕೂತಿದೆ.. ಭಾರತವೊಂದೇ ಅಲ್ಲ ಜಗತ್ತಿನ ನಾನಾ ಮೂಲೆಗಳಲ್ಲಿ ಸಂಕಷ್ಟದ ಪರಿಸ್ಥಿತಿ ಇನ್ನೂ ನಮ್ಮಲ್ಲಂತೂ ಸಾಂಕ್ರಾಮಿಕದ ವಿರುದ್ಧ ಒಂದಾಗಿ ಹೋರಾಡಬೇಕಾದ ಸಮಯದಲ್ಲಿ ಕೂಡ ವೈಮನಸ್ಯಗಳು.. ಕಿತ್ತಾಟಗಳು.. ಇವುಗಳ ಮೂಲ ಏನು.. ಮೂರು ದಿನಗಳ ಬದುಕಿಗಾಗಿ ಮನುಷ್ಯ ಮನುಷ್ಯನ ನಡುವೆ ಯಾಕೆ ಇಷ್ಟೊಂದು  ಅಹಂಕಾರದ ಗೋಡೆ.. ಈ ಪರಿಸ್ಥಿತಿ ಇವತ್ತು ಮಾತ್ರ ಅಲ್ಲ ಅವತ್ತೂ ಇತ್ತು .. ಇದಕ್ಕೆ ಕಾರಣ ಅವಿದ್ಯೆ ಅಂತ ಹೇಳ್ತಾರೆ ಆದಿಶಂಕರರು.. 

 ವಿದ್ಯೆ ಅಂದರೆ ನಾವು ಶಾಲಾ ಕಾಲೇಜುಗಳಲ್ಲಿ ಕಲಿತಿವಲ್ಲಾ ಅದಲ್ಲಾ.. ವಿಧ್ಯೆ ಅಂದ್ರೆ ಮನುಷ್ಯ ಬದುಕನ್ನು ಅರ್ಥ ಮಾಡ್ಕೊಳೋದು.. ಮನುಷ್ಯ ಆಧ್ಯಾತ್ಮಿಕ ಅನುಭವಗಳನ್ನು ಪಡ್ಕೊಳೋದು .. ಮನುಷ್ಯ ಆತ್ಮಜ್ಞಾನವನ್ನು ಸಂಪಾದಿಸೋದು ..ಯಾರಿಗೆ ಆತ್ಮಜ್ಞಾನ ಸಿದ್ದಿಯಾಗುತ್ತೋ ನಾನು ಯಾರು ಅನ್ನೋದು ಯಾರಿಗೆ ಅರ್ಥವಾಗುತ್ತೋ ಅಂತವನು ಎಲ್ಲ ರಾಗದ್ವೇಷಗಳನ್ನು ಮೀರಿ ಮಹಾ ಮಾನವತಾವಾದಿಯಾಗಿ ಎಲ್ಲರನ್ನು ಸಮಾನವಾಗಿ ಪ್ರೀತಿಸುವ ಶಕ್ತಿ ಯನ್ನು ಪಡ್ಕೊತಾನೆ...  ಅಂಥ ಆತ್ಮಜ್ಞಾನದ ವಿದ್ಯೆಯಿಲ್ಲದೆ ಇರುದೋ #ಅವಿಧ್ಯೇ       ಈ ಅವಿದ್ಯೆ ನಾನು ಬೇರೆ ನೀನು ಬೇರೆ ಎಂಬ ಮನಸ್ಥಿತಿಗೆ ಕಾರಣವಾಗುತ್ತದೆ ..

 ಈ ಬೇರೆ ಅನ್ನೋ ಭೇದ ಇದೆಯಲ್ಲಾ, ಇದು ಅಸೂಯೆ ದ್ವೇಷ ಗಳಿಗೆ ಶ್ರೇಷ್ಠತೆಯ ರೋಗಗಳಿಗೆ ಕಾರಣವಾಗುತ್ತದೆ..  ಇನ್ನೂ ಈ ಅವಿದ್ಯೆಯಾಕುಂಟಾಗುತ್ತೆ...  ನಮ್ಮ ಉಪನಿಷತ್ತುಗಳು ವೇದಗಳು... ಇವೆಲ್ಲಾ ಜ್ಞಾನದ ಬಗ್ಗೆ ಇಷ್ಟೇಲ್ಲಾ ಹೇಳಿರುವಾಗಲೂ ಅದನ್ನ ಅಭ್ಯಾಸ ಮಾಡಿದವರಲ್ಲಿ ಕೂಡ ಈ ಭೇದಭಾವ ಅಥವಾ  ಅವಿದ್ಯೆ ಯಾಕೆ .. ಇದಕ್ಕೆ ಕಾರಣ ನಾವು ಯಾವುದನ್ನ ಅರ್ಥ ಮಾಡ್ಕೋಬೇಕು ಅದನ್ನ ಸರಿಯಾಗಿ ಅರ್ಥಮಾಡಿಕೊಳ್ಳದೇ ಇರೋದು...  ನಮ್ಮಲ್ಲಿನ ಗೊಂದಲಗಳಿಗೆ ಉತ್ತರವನ್ನ  ಹುಡುಕದೇ ಇರುವುದು...  ನಮ್ಮ ಮನಸ್ಸಲ್ಲಿನ ಸಂಶಯಗಳು ಹೆಚ್ಚಾಗುವುದು ಹಾಗೂ ನಾವು ವಿಷಯಗಳನ್ನು ಅಪಾರ್ಥ ಮಾಡ್ಕೊಳೋದು ಈ ಜಗತ್ತಲ್ಲಿ ನಾನು ಬೇರೆಯಲ್ಲ ಈ ಜಗತ್ತಿನ ಸೃಷ್ಟಿ ಬೇರೆಯಲ್ಲಾ..  ನನ್ನಲ್ಲಿರೋದೇ ಇಡೀ ಜಗತ್ತಿನ ಪ್ರತಿಯೊಂದು ಜಡ ಚೇತನದಲ್ಲೂ ಇದೇ ಅನ್ನೋ ಭಾವ ಇದೆಯಲ್ಲಾ ಅದೇ #ಅದ್ವೈತ...
.
ನಾನು ಮತ್ತು ಈ ಜಗತ್ತು ಒಂದೇ ಧಾತುವಿನಿಂದ ಸೃಷ್ಟಿಯಾದ ಮೇಲೆ ನಾನು ಬೇರೆ ಜಗತ್ತು ಬೇರೆ ಹೇಗಾಗೋದಕ್ಕೆ ಸಾಧ್ಯ...  ನಮ್ಮಲ್ಲಿನ ಜೀವ ನಿನ್ನಲ್ಲಿನ ಜೀವ  ಎರಡೂ ಒಂದೇ ಆದಾಗ ನಾನು ಬೇರೆ ನೀನು ಬೇರೆ ಹೇಗೆ.. ನಾವಿಬ್ಬರೂ ಒಂದೇ ಅಂದಮೇಲೆ ಜಗಳ ಭಿನ್ನಾಭಿಪ್ರಾಯಗಳು, ಮೇಲು ಕೀಳು ಅನ್ನೋ ಭೇದಗಳು ಅಹಂಕಾರಗಳು ,ಇವೆಲ್ಲ ಇರೋದಿಕ್ಕೆ ಸಾಧ್ಯವೇ ಇಲ್ಲ.. 
 ಇದನ್ನೇ ಗೀತೆಯಲ್ಲಿ #ಕೃಷ್ಣ ಕೂಡ ಹೇಳ್ತಾರೆ.. ( "ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ, ಸರ್ವ ದೇವ ನಮಸ್ಕಾರಂ ಕೇಶವಂ ಪ್ರತಿ ಗಚ್ಛತಿ".)

ಅಂದರೆ "ಹೇಗೆ ಆಕಾಶದಿಂದ ಬೀಳುವ ಪ್ರತಿಯೊಂದು ಮಳೆ ಹನಿಯು ನದಿಗಳ ಮೂಲಕ ಸಮುದ್ರವನ್ನು ಸೇರುತ್ತದೆಯೋ, ಅದೇ ರೀತಿ ನಾವು ಯಾವ ದೇವರಿಗೆ ನಮಸ್ಕಾರ ಮಾಡಿದರು ಅದು ಕೇಶವನ (ಸರ್ವಶಕ್ತನಾದ ಭಗವಾಂತ) ಕಡೆಗೆ ಹೋಗುತ್ತದೆ."
  
ನಮ್ಮ ಉಪನಿಷತ್ತುಗಳು ಹೇಳೋದು ಕೂಡ ಜಗತ್ತಿನ ಪ್ರತಿಯೊಂದು ಜೀವಜಂತುಗಳಲ್ಲಿನ ಬ್ರಹ್ಮ ಒಬ್ಬನೇ ಅಂತ... ಇದು ನಮಗೆ ಅರ್ಥವಾಗಿ ಬಿಟ್ರೆ, ನಮ್ಮಲ್ಲಿನ ಅಹಂಕಾರಕ್ಕೆ ಈರ್ಷೆಗೆ ಅವಕಾಶ ಇರುವುದಿಲ್ಲ ಅಂತ ಹೇಳ್ತಾರೆ #ಆದಿಶಂಕರಾಚಾರ್ಯರು... ಇನ್ನು ಧರ್ಮದ ಸಂರಕ್ಷಣೆ ಅಂತ ಬಂದಾಗ ಯಾರೋ ಬಂದು ನಮ್ಮನ್ನ ಕಾಪಾಡಬೇಕಾದ ಅಗತ್ಯ ಇಲ್ಲ .. ನಾನೇ ಬ್ರಹ್ಮ .. ಆಗಿದ್ದಾಗ ನಮ್ಮ ಸುತ್ತಲಿನ ಪರಿಸರವನ್ನು ಜಗತ್ತನ್ನ ಮನುಷ್ಯತ್ವವನ್ನು ಸಮಾಜವನ್ನು ಕಾಪಾಡಬೇಕಾದ ಜವಾಬ್ದಾರಿ ಬ್ರಹ್ಮನಾದ ನನ್ನದೇ ಹೊರತು ಅದಕ್ಕಾಗಿ ಬೇರ್ಯಾರೋ ಹುಟ್ಟಿಬರಬೇಕಿಲ್ಲಾ ಅಂತ ಹೇಳೋ ಮೂಲಕ  ನಮ್ಮಲ್ಲಿ ಸಾಮಾಜಿಕ ಜವಾಬ್ದಾರಿಗೆ ಕೂಡ ಕಾರಣರಾಗ್ತಾರೆ #ಆದಿಶಂಕರಾಚಾರ್ಯರು... 

ಶಂಕರರು #ದಿವ್ಯಜ್ಞಾನದ ಸಾಕಾರ ಮೂರ್ತಿ... ಆದರೆ ಕಾಲಕ್ರಮೇಣ ಶಂಕರರು ಹೇಳಿದ ಅವಿದ್ಯೆ ಅನ್ನೋದು ಶಂಕರರನ್ನು ಅರ್ಥಮಾಡಿಕೊಳ್ಳದ ವಿಷಯದಲ್ಲಿ ಕೂಡ ಆಯ್ತು ಅನ್ನೋದು ಅತ್ಯಂತ ದುಃಖದ ಸಂಗತಿ...

ವೈಶಾಖ ಶುದ್ಧ ಪಂಚಮಿಯಂದು "ಶ್ರೀ ಶಂಕರ ಜಯಂತಿ" ಈ ದಿನವನ್ನು ಭಾರತ ಸರ್ಕಾರ ದಾರ್ಶನಿಕರ ದಿನ ಎಂದು ಘೋಷಿಸಿದೆ

1.ಶ್ರೀ ಶಂಕರ ಜಯಂತಿ :
ವೈಶಾಖ ಶುದ್ಧ ಪಂಚಮಿ

2.ಕಾಲ : ಕ್ರಿ.ಶ.788-820

3.ತಾಯಿ-ತಂದೆ 
ಆರ್ಯಾಂಬಾ ಶಿವಗುರು

4.ಜನ್ಮಸ್ಥಳ : ಕೇರಳದ ಪೂರ್ಣ ನದಿ ತೀರದ ಕಾಲಡಿ

5.ಸನ್ಯಾಸ ಸ್ವೀಕಾರ : ಎಂಟನೆಯ ವರ್ಷ

6.ಗುರುಗಳು : ಶ್ರೀ ಗೋವಿಂದ ಭಗವತ್ಪಾದರು

7. ಪ್ರತಿಪಾದಿಸಿದ ದರ್ಶನ : ಅದ್ವೈತ ಸಿದ್ಧಾಂತ

8.ಪಂಥಗಳು : ಶಿವ,ವೈಷ್ಣವ,ಶಾಕ್ತ,ಸೌರ ಗಾಣಪತ್ಯ,ಕೌಮಾರ.

9.ಪಂಚಾಯತನ ದೇವತೆಗಳು :
ಸೂರ್ಯ,ಗಣಪತಿ,ದುರ್ಗೆ,ಶಿವ,ವಿಷ್ಣು.

10.ಶಂಕರರ ಮಾತೃಭಾಷೆ : ಮಲಯಾಳಂ

11. ಶಂಕರರ ಸಂಪರ್ಕ ಭಾಷೆ : ಸಂಸ್ಕೃತ
12.ಚಿನ್ನದ ನೆಲ್ಲಿಕಾಯಿ ಮಳೆ ಸುರಿಸಿದ ಸ್ತೋತ್ರ : ಕನಕಧಾರ ಸ್ತೋತ್ರ

13.ನೆಲ್ಲಿಕಾಯಿ ಭಿಕ್ಷೆಯಿತ್ತ ಮನೆಯ ಇಂದಿನ ಹೆಸರು : ಸ್ವರ್ಣತ್ತಿಲ್ಲಂ

14.ಗುರುದ್ರೋಹ : ತುಷಾಗ್ನಿಯಲ್ಲಿ ಆತ್ಮ ಸಮರ್ಪಿಸಿಕೊಂಡವರು,ಕುಮಾರಿಲ ಭಟ್ಟರು ( ಕುಮಾರ್ಲ ಭಾಟ್ )

15.ಶಂಕರರ ಶಿಷ್ಯಂದಿರು ಮತ್ತು ಪೀಠಗಳ ಪ್ರಥಮಾಚಾರ್ಯರು : ಪದ್ಮಪಾದಚಾರ್ಯ,ಹಸ್ತಾಮಲಕಾಚಾರ್ಯ,ತೋಟಕಾಚಾರ್ಯ,ಸುರೇಶ್ವರಾಚಾರ್ಯ

16. ಪದ್ಮಪಾದಾಚಾರ್ಯರ ಪೂರ್ವನಾಮ : ಸನಂದನ

17.ಸುರೇಶ್ವರಾಚಾರ್ಯರ ಪೂರ್ವನಾಮ : ಮಂಡನ ಮಿಶ್ರ

18.ರಚಿಸಿದ ಗ್ರಂಥಗಳು : 54

19.ರಚಿಸಿದ ಕೊನೆಯ ಗ್ರಂಥ : ವಿವೇಕ ಚೂಡಾಮಣಿ

20.ಪ್ರಸ್ಥಾನತ್ರಯಗಳು : ಬ್ರಹ್ಮಸೂತ್ರ,ಭಗವದ್ಗೀತೆ,ಉಪನಿಷತ್ತುಗಳು

21.ಬ್ರಹ್ಮ ಸೂತ್ರ : 555 ಸೂತ್ರಗಳು 

22.ಭಗವದ್ಗೀತೆ : 18 ಅಧ್ಯಾಯ ( ವ್ಯಾಖ್ಯಾನ ) 700 ಶ್ಲೋಕಗಳು

23.ಉಪನಿಷತ್ತುಗಳು  :  10

24.ರಚಿಸಿದ ಸ್ತೋತ್ರಗಳು : 72

25.ಕಾಶ್ಮೀರದಲ್ಲಿ ಕುಷ್ಠರೋಗಿಯ ಮೋಕ್ಷಕ್ಕಾಗಿ ಹೇಳಿದ ಸ್ತೋತ್ರ : ಏಕಶ್ಲೋಕಿ ( ಕಿಂ ಜ್ಯೋತಿಸ್ತವ )

26.ಕಾಶಿಯಲ್ಲಿ ರಚಿಸಿದ ಸ್ತೋತ್ರಗಳು : 1.ಕಾಲಭೈರವಾಷ್ಟಕ, 2.ಮನೀಷಾ ಪಂಚಕ
3.ಅನ್ನಪೂರ್ಣ ಸ್ತೋತ್ರ 4.ಕಾಶಿ ಸ್ತೋತ್ರ

27.ಚತುರಾಮ್ನಾಯ ಪೀಠಗಳು : 
ಮತ್ತು ಪೀಠಗಳ ಪ್ರಥಮಾಚಾರ್ಯರು :
ಶೃಂಗೇರಿ ಪೀಠ  - ಸುರೇಶ್ವರಾಚಾರ್ಯರು - ದಕ್ಷಿಣ
ಜಗನ್ನಾಥ ಪೀಠ - ಪದ್ಮಪಾದಾಚಾರ್ಯರು - ಪೂರ್ವ
ದ್ವಾರಕಾ ಪೀಠ - ಹಸ್ತಾಮಲಕಾಚಾರ್ಯರು - 292
ಪಶ್ಚಿಮ
ಜ್ಯೋತಿಷ್ಮತಿ ಪೀಠ - ತೋಟಕಾಚಾರ್ಯರು - ಉತ್ತರ

29.ಪೀಠಗಳ ದೇವದೇವಿಯರು 1.ಚಂದ್ರಮೌಳೇಶ್ವರ - ಶಾರದ ದೇವಿ
2.ಜಗನ್ನಾಥ - ವಿಮಲಾದೇವಿ
3.ಸಿದ್ದೇಶ್ವರ - ಭದ್ರಕಾಳಿ
4.ನಾರಾಯಣ - ಪೂರ್ಣದೇವಿ

30.ಪವಿತ್ರ ತೀರ್ಥಗಳು - ತುಂಗಾ,ಗೋಮತಿ,ಅಲಕಾನಂದ,ಪೂರ್ವಸಮುದ್

31.ಸರ್ವಜ್ಞ ಪೀಠಾರೋಹಣ : ಕಾಶ್ಮೀರದ ಶಂಕರ ಗಿರಿಯಲ್ಲಿರುವ ಶಾರದ ಮಂದಿರ 

32.ಶಂಕರರ ಮಹಾ ಸಿದ್ಧಾಂತ : ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ
ಅರ್ಥ : ಬ್ರಹ್ಮವು ಸತ್ಯ,ಜಗತ್ತು ಮಿಥ್ಯಾ ಜೀವವು ಬ್ರಹ್ಮಕ್ಕಿಂತ ಬೇರೆಯಲ್ಲ
ಅರ್ಥ - ಬ್ರಹ್ಮನ್ (ದೇವರು/ಪರಮಾತ್ಮ) ಮಾತ್ರ ಸತ್ಯ, ಜಗತ್ತೆಲ್ಲ ಸುಳ್ಳು ಅಥವಾ ಮಾಯೆ, ಜೀವಿಗಳು (ಜೀವಾತ್ಮ) ಆ ಪರಮಾತ್ಮಗಿಂತ ಬೇರೆ ಅಲ್ಲ.

33.ಶಂಕರರ ಸಾಧನೆ ; 1.ಅಷ್ಟವರ್ಷೇ ಚತುರ್ವೇದಿ - 8 ನೇ ವರ್ಷಕ್ಕೆ 4 ವೇದಗಳ ಅಧ್ಯಯನ

2.ದ್ವಾದಶೇ ಸರ್ವಶಾಸ್ತೃಸರ್ವಶಾಸ್ತವಿ ತ್ - 12 ನೇ ವರ್ಷಕ್ಕೆ ಸಕಲ ಶಾಸ್ತೃಗಳ ಪಾಂಡಿತ್ಯ 

3.ಷೋಡಶೇ ಕೃತವಾನ್ ಭಾಷ್ಯಂ - 16 ನೇ ವರ್ಷಕ್ಕೆ ಭಾಷ್ಯ ರಚನೆ

4.ಮುವತ್ತೆರಡನೆ ವರ್ಷಕ್ಕೆ ಅವರು ಪತ್ತೆಯಾಗದವರೆಗೂ ಹಿಮಾಲಯದಲ್ಲಿ ನಡೆಯುತ್ತಿದ್ದರು ಎಂದು ಗ್ರಂಥಗಳು ಹೇಳುತ್ತವೆ...‌ 

34.ಕೇದಾರನಾಥದಲ್ಲಿ ಅವರು ಪತ್ತೆಯಾಗದವರೆಗೂ ಹಿಮಾಲಯದಲ್ಲಿ ನಡೆಯುತ್ತಿದ್ದರು, ಸಶರೀರವಾಗಿ ಕೈಲಾಸಕ್ಕೆ ಹೊರಡುತ್ತಾರೆ ಎಂದು ಗ್ರಂಥಗಳು ಹೇಳುತ್ತವೆ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries