ಕೊಚ್ಚಿ: ಸ್ವಾಮಿ ಚಿನ್ಮಯಾನಂದ ಸ್ವಾಮಿಗಳು ದೇಶದ ಆಧ್ಯಾತ್ಮಿಕ ದಿಗಂತಕ್ಕೆ ಕೇರಳದಿಂದ ಮಹಾನ್ ಕೊಡುಗೆ ನೀಡಿದ ಅತ್ಯುತ್ತಮ ನಕ್ಷತ್ರ ಎಂದು ಆರ್ಎಸ್ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಸ್ವಾಮಿ ಚಿನ್ಮಯಾನಂದರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ. ಅವರು ಜ್ಞಾನ ಮತ್ತು ಆತ್ಮವಿಶ್ವಾಸವನ್ನು ನೀಡುವ ಮೂಲಕ ಜನರನ್ನು ನೆಟ್ಟಗೆ ನಿಲ್ಲುವಂತೆ ಮಾಡಿದ ಶಿಕ್ಷಕರು. ಅವರು ವಿಶ್ವ ಹಿಂದೂ ಸಂಘಟನೆಯಾಗಬೇಕೆಂದು ಬಯಸಿದ್ದರು. ಅವರು ರಾಮ ಜನ್ಮಭೂಮಿ ಆಂದೋಲನವನ್ನು ಬೆಂಬಲಿಸಿದರು. ಹಿಂದೂ ಮತ ಬ್ಯಾಂಕ್ ಇರಬೇಕು ಎಂದರು. ಅನೇಕರು ಅವರನ್ನು ಅಪಹಾಸ್ಯ ಮಾಡಿದ್ದರು. ಸ್ವಾಮೀಜಿಯವರ ಎರಡು ಮಹಾನ್ ಕನಸುಗಳಾದ ಹಿಂದೂ ಸಂಘಟನೆ ಮತ್ತು ಭವ್ಯ ರಾಮಮಂದಿರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾಕಾರಗೊಂಡಿತು ಎಂದರು.
ಕೊಚ್ಚಿಯಲ್ಲಿ ಗ್ಲೋಬಲ್ ಚಿನ್ಮಯ ಮಿಷನ್ ನೇತೃತ್ವದಲ್ಲಿ ನಡೆದ ಚಿನ್ಮಯ ಶಂಕರಂ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ಚಿನ್ಮಯಾನಂದರ ವರ್ಷಗಳ ಹಿಂದಿನ ಕನಸುಗಳನ್ನು ಕೇಂದ್ರ ಸರ್ಕಾರ ಇಂದು ದೇಶದಲ್ಲಿ ಸಾಕಾರಗೊಳಿಸುತ್ತಿದೆ. ಸ್ವಾಮಿ ಚಿನ್ಮಯಾನಂದರು ದೇಶದ ಶಿಕ್ಷಣ ಕ್ಷೇತ್ರದ ಬಗ್ಗೆ ಸ್ಪಷ್ಟ ದೃಷ್ಟಿಯನ್ನು ಹೊಂದಿದ್ದರು. ಚಿನ್ಮಯ ಮಿಷÀನ್ನ ಶಿಕ್ಷಣ ಸಂಸ್ಥೆಗಳ ಮೂಲಕ ಅದನ್ನು ಜಾರಿಗೆ ತಂದು ದೇಶಕ್ಕೆ ತೋರಿಸಿದರು. ಇದರಿಂದ ಸ್ಫೂರ್ತಿಗೊಂಡ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿತು. ಚಿನ್ಮಯಾನಂದ ಸ್ವಾಮಿ ಅವರ 108ನೇ ಜನ್ಮ ವರ್ಷದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸನ್ನು ನನಸು ಮಾಡಿರುವುದು ದೊಡ್ಡ ಸಾಧನೆಯಾಗಿದೆ ಎಂದರು.