HEALTH TIPS

ಶಾಲಾ ಸುವರ್ಣಮಹೋತ್ಸವ ಸಮಾರಂಭ-ಗಮನಸೆಳೆದ ಆಹಾರ ಮೇಳ

          ಕಾಸರಗೋಡು: ನಗರದ ನೆಲ್ಲಿಕುಂಜೆಯ ಬಾಲಕಿಯರ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ ಆಹಾರ ಮೇಳ ಶಾಲೆಯಲ್ಲಿ ನಡೆಯಿತು. ಕಾಸರಗೋಡು ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಸಮಾರಂಭ ಉದ್ಘಾಟಿಸಿದರು. ಶಾಲಾ ಪಿಟಿಎ ಅಧ್ಯಕ್ಷ ರಾಶಿದ್ ಪೂರಣಂ ಅಧ್ಯಕ್ಷತೆ ವಹಿಸಿದ್ದರು.  ಶಹಾನಾ ಸಲಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಾರ್ಡ್ ಕೌನ್ಸಿಲರ್ ವೀಣಾ ಅರುಣ್ ಶೆಟ್ಟಿ, ಸಲೀಂ ಬಹ್ರೇನ್, ಎಸ್. ಎಂಸಿ ಅಧ್ಯಕ್ಷ ಇಬ್ರಾಹಿಂ ಚೌಕಿ, ಪಿಟಿಎ ಉಪಾಧ್ಯಕ್ಷ ಟಿ.ಎಂ.ಮನ್ಸೂರ್, ಮುಖ್ಯ ಶಿಕ್ಷಕಿ ಪಿ. ಸವಿತಾ, ವಿಎಚ್‍ಎಸ್‍ಇ ಪ್ರಾಂಶುಪಾಲೆ ಆರ್.ಎಸ್.ಶ್ರೀಜಾ, ಸಾಬಿರಾ ಎವರೆಸ್ಟ್, ಕುಶಾಲಾ ಕುಮಾರಿ,  ಕಮರುನ್ನೀಸಾ ಕಡವತ್, ಹಸೈನಾರ್ ತಳಂಗರ, ಅಬ್ದುಲ್ ರೆಹಮಾನ್ ಬಾಂಗೋಡ್,  ಕಮರುದ್ದೀನ್ ತಳಂಗರ, ಶಾಫಿ ತೆರುವತ್,  ಸೂರ್ಯನಾರಾಯಣ ಭಟ್, ರಫಿ ಕುನ್ನಿಲ್ ಮೊದಲಾದವರು ಉಪಸ್ಥಿರಿದ್ದರು.

              ಸುವರ್ಣಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಎಂ. ರಾಜೀವನ್ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಸಿ.ಕೆ.ಮದನನ್ ವಂದಿಸಿದರು. ನಂತರ ಸಾರ್ವಜನಿಕರಿಗೆ ಕಾಸರಗೋಡಿನ ವಿಶಿಷ್ಟ ಖಾದ್ಯಗಳನ್ನು ವಿತರಿಸಲಾಯಿತು.

             ನಗರಸಭೆ ಸದಸ್ಯೆ ವೀಣಾ ಅರುಣ್ ಶೆಟ್ಟಿ ಮಳಿಗೆಗಳನ್ನು ನಿರ್ಮಿಸಿದ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಸಮಾರಂಭದ ಅಂಗವಾಗಿ ವೇದಿಕೆಯಲ್ಲಿ ವಿವಿಧ ಕಲಾ, ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries