HEALTH TIPS

ಮತ ಎಣಿಕೆ ಸಿದ್ಧತೆಗಳ ಮೌಲ್ಯಮಾಪನಕ್ಕೆ ಅಧಿಕಾರಿಗಳ ಸಭೆ

                     ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಕೆ. ಇನ್ಬಾಶೇಖರನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಚುನಾವಣಾಧಿಕಾರಿಗಳ ಸಭೆಯಲ್ಲಿ ಮತ ಎಣಿಕೆ ಸಿದ್ಧತೆ ಕುರಿತು ಪರಿಶೀಲನೆ ನಡೆಸಲಾಯಿತು. ಜೂನ್ 4 ರಂದು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಮತ ಎಣಿಕೆಗೆ ಚುನಾವಣಾ ಆಯೋಗ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್, ಜಾಗಿಪೆÇೀಲ್, ಪಿ.ಬಿನುಮೋನ್, ನಿರ್ಮಲರೀತಾ ಗೋಮ್ಸ್ ಮಾರ್ಗಸೂಚಿಯಂತೆ ಸಿದ್ಧತೆಗಳು ಪ್ರಗತಿಯಲ್ಲಿವೆ ಎಂದು ಸಭೆ ನಿರ್ಣಯಿಸಿತು.

             ಪಿ. ಶಾಜು ಸಿರೋಶ್ ಪಿ. ಜಾನ್ ಕೆ. ಅಜಿತ್ ಕುಮಾರ್ ಚುನಾವಣಾ ಅಪರ ಜಿಲ್ಲಾಧಿಕಾರಿ ಪಿ. ಅಖಿಲ ಎಡಿಎಂ ಕೆ.ವಿ. ಶೃತಿ ನೋಡಲ್ ಅಧಿಕಾರಿಗಳು ತಹಸೀಲ್ದಾರ್ ಚುನಾವಣಾ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಪೋಸ್ಟ್ಟಲ್ ಬ್ಯಾಲೆಟ್, ಎಆರ್‍ಒ ಮೈಕ್ರೋ ಅಬ್ಸರ್ವರ್ ಎಣಿಕೆ ಮೇಲ್ವಿಚಾರಕ ಎಣಿಕೆ ಸಹಾಯಕರಿಗೆ ತರಬೇತಿ ನೀಡಲಾಯಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries