HEALTH TIPS

ನಮಗೆ ಮಾತ್ರವಲ್ಲ ಹಸುಗಳೂ ದಣಿದಿವೆ: ಕೊಟ್ಟಿಗೆಯಲ್ಲಿ ಇರಲಿ ಫ್ಯಾನ್: ಪಶು ಕಲ್ಯಾಣ ಇಲಾಖೆ

           ಕೋಝಿಕ್ಕೋಡ್: ಬೇಸಿಗೆಯ ಬೇಗೆಯಿಂದ ಸಂಕಷ್ಟದಲ್ಲಿ ನಲುಗುತ್ತಿರುವುದು ಮನುಷ್ಯರಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚು ಪರಿತಪಿಸುತ್ತಿರುವುದು ಪ್ರಾಣಿವರ್ಗ.ಈ ಪೈಕಿ ಹಸುಗಳು, ಶ್ವಾನ, ಬೆಕ್ಕು ಮುಂತಾದ ಸಾಕುಪ್ರಾಣಿಗಳ ಅವಸ್ಥೆ ಕರುಣಾಜನಕವಾಗುತ್ತಿದೆ. ಈ ನಿಟ್ಟಿನಲ್ಲಿ ಹಸುಗಳಿಗೆ ಹೈನುಗಾರರು ಬೆಚ್ಚನೆ ನೀಡುತ್ತಾರೆ. ರೈತರು ಕೊಟ್ಟಿಗೆಗಳಲ್ಲಿ ಫ್ಯಾನ್‍ಗಳನ್ನು ಅಳವಡಿಸುವ ಮೂಲಕ ಹಸುಗಳನ್ನು ವಿಪರೀತ ಶಾಖದಿಂದ ರಕ್ಷಿಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.

           ಅತಿ ಶಾಖದ ಪಟ್ಟಿಯಲ್ಲಿ ಮೇಲಿರುವ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಈ ಬಾರಿಯ ಬೇಸಿಗೆಯಲ್ಲಿ 33 ಜಾನುವಾರುಗಳು ಬಿಸಿಲಿನಿಂದ ಸಾವನ್ನಪ್ಪಿವೆ. ಹೀಗಾಗಿ ರೈತರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಶಾಖವನ್ನು ಎದುರಿಸಲು ರೈತರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ.

         ಹಸುಗಳನ್ನು ತಂಪಾಗಿಡಲು ಕೊಟ್ಟಿಗೆಯಲ್ಲಿ ಫ್ಯಾನ್ ಅಳವಡಿಸುವುದು ಹೊಸದೇನಲ್ಲ. ಆದರೆ ಈಗ ಬಿಸಿಲಿನ ಝಳ ಹೆಚ್ಚಾಗಿದ್ದು, ಜಾನುವಾರುಗಳ ಜೀವಕ್ಕೆ ಅಪಾಯವಿದೆ ಎಂಬುದನ್ನು ಮನಗಂಡ ರೈತರು ಈ ಸೌಲಭ್ಯಗಳನ್ನು ಹೆಚ್ಚೆಚ್ಚು ಅಳವಡಿಸಿಕೊಂಡಿರುವುದು ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವೆಡೆ ಬಿಸಿಲಿನ ತಾಪಕ್ಕೆ ಜಾನುವಾರುಗಳು ಸಾವನ್ನಪ್ಪುತ್ತಿರುವ ಸುದ್ದಿ ಹೊರಬಿದ್ದಿದೆ. ಇದರೊಂದಿಗೆ ಜಾನುವಾರುಗಳನ್ನು ಶಾಖದಿಂದ ರಕ್ಷಿಸಲು ಪಶು ಕಲ್ಯಾಣ ಇಲಾಖೆಯೂ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ.

 ಜಾನುವಾರುಗಳನ್ನು ಶಾಖದಿಂದ ರಕ್ಷಿಸಲು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು:

               ಕೊಟ್ಟಿಗೆಯಲ್ಲಿ ಉತ್ತಮ ಗಾಳಿಯನ್ನು ಒದಗಿಸಬೇಕು. ಬೆಳಿಗ್ಗೆ 11 ರಿಂದ ಸಂಜೆ 4 ರ ನಡುವೆ ಬಿಸಿಲಿನಲ್ಲಿ ಜಾನುವಾರುಗಳನ್ನು ಕಟ್ಟುವುದನ್ನು ತಪ್ಪಿಸಬೇಕು.  24 ಗಂಟೆಗಳ ಕಾಲ ಕುಡಿಯಲು ತಣ್ಣೀರು ಒದಗಿಸಬೇಕು. ಫೀಡ್‍ನಲ್ಲಿ ಸಾಧ್ಯವಾದಷ್ಟು ಹಸಿರು ಹುಲ್ಲನ್ನು ಒದಗಿಸಬೇಕು. ಹಟ್ಟಿಯಲ್ಲಿ ಫ್ಯಾನ್ ಇರಿಸಬೇಕು. ಶೆಡ್‍ನ ಮೇಲ್ಛಾವಣಿಯನ್ನು ತೆಂಗಿನ ಗರಿಗಳಿಂದ ಮುಚ್ಚಬೇಕು. ಕೊಟ್ಟಿಗೆಯಲ್ಲಿ ಸೊಂಪಾದ ಸಸ್ಯಗಳನ್ನು ಹರಡುವುದರಿಂದ ಹಸುಗಳನ್ನು ಶಾಖದಿಂದ ರಕ್ಷಿಸಲ್ಪಡುತ್ತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries