HEALTH TIPS

ಡ್ರೈವಿಂಗ್ ಸ್ಕೂಲ್ ವಲಯವನ್ನು ಮಾರಾಟಮಾಡುವ ಯತ್ನ: ಸಾರಿಗೆ ಸಚಿವರ ಹಠಮಾರಿ ನಿಲುವು: ಜಂಟಿ ಮುಷ್ಕರ ಸಮಿತಿ

                ತಿರುವನಂತಪುರ: ಸಾರಿಗೆ ಸಚಿವ ಕೆ.ಬಿ.ಗಣೇಶ್‍ಕುಮಾರ್ ಅವರನ್ನು ಜಂಟಿ ಮುಷ್ಕರ ಸಮಿತಿ ತೀವ್ರವಾಗಿ ಟೀಕಿಸಿದೆ. ಸಾರಿಗೆ ಸಚಿವರ ಧೋರಣೆ ದುರಹಂಕಾರದಿಂದ ಕೂಡಿದ್ದು, ಪರೀಕ್ಷೆ ಹೇಗೆ ನಡೆಯುತ್ತಿದೆ ಎಂಬುದನ್ನು ಸಚಿವರು ನೋಡಿಲ್ಲ ಎಂದು ಸಮಿತಿ ಆರೋಪಿಸಿದೆ.

                    ಸಚಿವರದ್ದು ತುಘಲಕ್ ಸುಧಾರಣೆಯಾಗಿದೆ. ಡ್ರೈವಿಂಗ್ ಸ್ಕೂಲ್ ಕ್ಷೇತ್ರವನ್ನು ಯಾರಿಗಾದರೂ ಹಸ್ತಾಂತರಿಸುವ ಪ್ರಯತ್ನ ನಡೆಯುತ್ತಿದೆಯೇ. ಸಚಿವ ಗಣೇಶ್ ಕುಮಾರ್ ಆ ಪಟ್ಟಕ್ಕೆ ಅರ್ಹರಲ್ಲ ಎಂದು ಡ್ರೈವಿಂಗ್ ಸ್ಕೂಲ್ ಮಾಲೀಕರೂ ಟೀಕಿಸಿದ್ದಾರೆ. ಡ್ರೈವಿಂಗ್ ಟೆಸ್ಟ್ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆಗೆ ಕರೆದ ಸಚಿವರು ಬೆದರಿಕೆ ಹಾಕಿದ್ದಾರೆ ಎಂದು ಜಂಟಿ ಮುಷ್ಕರ ಸಮಿತಿ ಆರೋಪಿಸಿದೆ.

                ನಿರ್ಧಾರವನ್ನು ವಿರೋಧಿಸಿದರೆ ನಿಮ್ಮ ಹಣೆಬರಹ ತಿಳಿಯುತ್ತದೆ ಎಂಬ ಪ್ರಮೇಯದಿಂದ ಚರ್ಚೆ ಆರಂಭವಾಯಿತು. ಸಿಐಟಿಯುವನ್ನು ಮಾತ್ರ ಕರೆದು ರಾಜಕೀಯವಾಗಿ ಪ್ರತ್ಯೇಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಮಿತಿ ಹೇಳಿದೆ. ಮುಷ್ಕರದ ಹಿಂದೆ ಮಲಪ್ಪುರಂ ಲಾಬಿ ಇದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ. ಆದರೆ ಉಳಿವಿಗಾಗಿ ಹೋರಾಟ ನಡೆಯುತ್ತಿದೆ ಎಂದು ಸಮಿತಿ ಕಟಕಿಯಾಡಿದೆ. 

                 ಡ್ರೈವಿಂಗ್ ಟೆಸ್ಟ್ ಸುಧಾರಣೆ ವಿರೋಧಿಸಿ ಎರಡನೇ ದಿನದಿಂದ ಡ್ರೈವಿಂಗ್ ಸ್ಕೂಲ್ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ಸೋಮವಾರ ಸೆಕ್ರೆಟರಿಯೇಟ್ ಮೆರವಣಿಗೆ ಮತ್ತು ಧರಣಿ ನಡೆಸುವುದಾಗಿ ಜಂಟಿ ಮುಷ್ಕರ ಸಮಿತಿ ಪ್ರಕಟಿಸಿದೆ. ಕೇರಳದ ಎಲ್ಲಾ ಡ್ರೈವಿಂಗ್ ಸ್ಕೂಲ್ ಮಾಲೀಕರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ. ಸಾರಿಗೆ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಕ್ರೆಟರಿಯೇಟ್ ಮೆರವಣಿಗೆ ನಡೆಸಲಾಗುವುದು. ನ್ಯಾಯಾಲಯದ ತೀರ್ಪಿನ ನಂತರ ಮುಷ್ಕರ ಕಾರ್ಯಕ್ರಮಗಳ ಕುರಿತು ಚಿಂತನೆ ನಡೆಸಲಿದ್ದು, ಅಗತ್ಯ ಬಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಮಿತಿ ತಿಳಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries