ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ(ರಿ) ಮಂಜೇಶ್ವರ, ತೂಮಿನಾಡು ಇದರ ಪ್ರಧಾನ ಕಛೇರಿಯ ಉದ್ಘಾಟನೆ ಭಾನುವಾರ ಜರಗಿತು. ಸಂಘದ ಕಚೇರಿಯನ್ನು ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಾಮೋದರ ಅಶೋಕನಗರ ಉದ್ಘಾಟಿಸಿದರು. ಪಿಲಿಕೂರು ಸಾಲ್ಯಾನ್ ಕುಟುಂಬ ಶ್ರೀನಾಗಬ್ರಹ್ಮ ಸೇವಾಟ್ರಸ್ಟ್ ಅಧ್ಯಕ್ಷ, ಕುಲಾಲ ಸಂಘದ ಕಟ್ಟಡ ಸಮಿತಿ ಕೊಶಾಧಿಕಾರಿ ಗೋಪಾಲ ಸಾಲ್ಯಾನ್ ಕುಂಜತ್ತೂರು ದೀಪಪ್ರಜ್ವಲನೆ ನೆರವೇರಿಸಿದರು.
ಮುಖ್ಯ ಅಥಿತಿಗಳಾಗಿ ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಕೈರಂಗಳ, ಅಡ್ಕ ಕುಲಾಲ ಬಂಗೇರ ಮೂಲಸ್ಥಾನದ ಮೂಲ್ಯಣ್ಣ ಹರೀಶ್ ಬಂಗೇರ, ಕಟ್ಟಡ ಸಮಿತಿ ಅಧ್ಯಕ್ಷ, ಉದ್ಯಮಿ ಬಾಲಕೃಷ್ಣ ದೀಕ್ಷಾ ಕುಂಜತ್ತೂರು, ಲೀಲಾವತಿ ಟೀಚರ್ ತಲಪಾಡಿ ಉಪಸ್ಥಿತರಿದ್ದರು. ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.
ಬೆಳಗ್ಗೆ 9.30ರಿಂದ 10.30 ರವರೆಗೆ ಶ್ರೀ ನಾಗಮೂಲ ಭಜನಾ ಮಂಡಳಿ ಅಡ್ಕ ಕುಂಜತ್ತೂರು ಇವರಿಂದ ಭಜನಾ ಕಾರ್ಯಕ್ರಮವು ಜರಗಿತು.ಸುಮಾರು 250 ಮಂದಿ ಕುಲಾಲ ಸಮಾಜದ ವಿದ್ಯಾರ್ಥಿಗಳಿಗೆ ರೂ. 75,000 ಮೌಲ್ಯದ ಉಚಿತ ಪುಸ್ತಕ ವಿತರಿಸಲಾಯಿತು. ಜಿಲ್ಲಾ ಕುಲಾಲ ಸಂಘದ ಕಚೇರಿ ಉದ್ಘಾಟನಾ ಸಹಾಯಾರ್ಥ ಹಮ್ಮಿಕೊಂಡ ಅದೃಷ್ಟನಿಧಿ ಕೂಪನ್ ನ ಡ್ರಾ ನಡೆಯಿತು. ಜಿಲ್ಲಾ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡ್ಡಿ ಸ್ವಾಗತಿಸಿ,ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಕುಲಾಲ್ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.