ಕಾಸರಗೋಡು: ಕಲಾಮಂಡಲಂ ರಾಮನ್ಕುಟ್ಟಿ ವಾರಿಯರ್ ಸ್ಮಾರಕ ಟ್ರಸ್ಟ್ನ ಸಹಯೋಗದಲ್ಲಿ ವಯಲಿನ್ ವಾದಕ ಎಂ.ಸುಬ್ರಹ್ಮಣ್ಯ ಶರ್ಮ ಅವರ 60ನೇ ಸಂಸ್ಮರಣಾ ಕಾರ್ಯಕ್ರಮ ಹಾಗೂ ವಯೊಲಿನ್ ಕಚೇರಿ ಪಿ.ಕೃಷ್ಣನ್ ನಾಯರ್ ಸ್ಮಾರಕ ಗ್ರಂಥಾಲಯದಲ್ಲಿ ನಡೆಯಿತು.
ಕಲಾಮಂಡಲಂ ಶಿವನ್ ನಂಬೂದಿರಿ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ, ವಯಲಿನ್ ವಾದಕ ಎಸ್.ಆರ್. ಮಹದೇವಶರ್ಮ ಸ್ಮರಣಾರ್ಥ ಉಪನ್ಯಾಸ ನೀಡಿದರು. ರಾಜನ್ ವಿಷ್ಣುಮಂಗಲಂ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಕಲಾಮಂಡಲಂ ಶಿವನ್ ನಂಬೂದಿರಿ ಅವರನ್ನು ಡಾ. ಸಿ. ಬಾಲನ್ ಗೌರವಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ. ಅರವಿಂದನ್, ಪದ್ಮನಾಭ ಸ್ವಾಮಿ ದೇವಸ್ಥಾನ ನಂಬಿ ಪದ್ಮನಾಭ ಮಧುರಂಪಾಡಿತ್ತಾಯರ್, ವಿ.ಎಂ.ದಿನೇಶನ್, ಕೊಟ್ಟಕಲ್ ನಾರಾಯಣನ್, ಟಿ.ಪಿ.ಶ್ರೀನಿವಾಸನ್, ಮೇರಿ ಕುಟ್ಟಿ ರಂಜನ್, ಡಾ.ಶಶಿಧರ ರಾವ್, ಕಲಾಮಂಡಲಂ ವಾಸುದೇವನ್ ನಂಬೀಸನ್, ಅನಿಲ್ ಪುಲಿಕಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಎಸ್.ಆರ್. ಮಹದೇವಶರ್ಮ, ಎಸ್.ಆರ್.ರಾಜಶ್ರೀ ಮಾಸ್ಟರ್ ಜಿ.ಎಲ್. ವೈದ್ಯನಾಥ ಶರ್ಮಾ ಅವರಿಂದ ವಯಲಿನ್ ವಾದನ ಕಚೇರಿ ನಡೆಯಿತು. ವಯಲಿನ್ನಲ್ಲಿ ಪಾಲಕ್ಕಾಡ್ ಕೆ.ಎಸ್. ಮಹೇಶ್ ಕುಮಾರ್, ಮೃದಂಗದಲ್ಲಿ ರತ್ನಶ್ರೀ ಅಯ್ಯರ್, ಘಟಂನಲ್ಲಿ ಅನಂತಕೃಷ್ಣನ್ ಸಹಕರಿಸಿದರು.