HEALTH TIPS

ನಾಲ್ವರು ಅಪ್ರಾಪ್ತರು ಸಹಿತ ಹತ್ತು ಮಂದಿ ನಕ್ಸಲರು ಶರಣು

ದಾಂತೇವಾಡ: ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ನಾಲ್ವರು ಸೇರಿದಂತೆ 10 ನಕ್ಸಲರು ಬುಧವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ನಕ್ಸಲರು ನಾರಾಯಣಪುರ ಜಿಲ್ಲೆಯ ರೇಖವಾಯ ಗ್ರಾಮಸ್ಥರಾಗಿದ್ದು, ದಕ್ಷಿಣ ಬಸ್ತಾರ್ ಪ್ರಾಂತ್ಯದ ಮಾವೋವಾದಿ ಇಂದ್ರವತಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ದಾಂತೇವಾಡ ಪೊಲೀಸ್‌ ವರಿಷ್ಠಾಧಿಕಾರಿ ಗೌರವ್ ರಾಯ್ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಎದುರು ಹಾಜರಾದ ಅವರು, ಹಿಂಸಾಚಾರ ತ್ಯಜಿಸಿ ನಿಮ್ಮ ಮನೆಗೆ ಹಿಂದಿರುಗಿ' ಅಭಿಯಾನದಿಂದ ತಾವು ಪ್ರಭಾವಿತರಾಗಿದ್ದು, ಮಾವೋವಾದಿ ಸಿದ್ದಾಂತದಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.
ಇವರಿಗೆ ರಸ್ತೆಯನ್ನು ಅಗೆಯುವುದು, ರಸ್ತೆಗಳಿಗೆ ಅಡ್ಡಲಾಗಿ ಮರಗಳನ್ನು ಬೀಳಿಸುವುದು ಮತ್ತು ನಕ್ಸಲರು ಬಂದ್‌ಗೆ ಕರೆಕೊಟ್ಟಾಗ ಬ್ಯಾನ‌ರ್ ಮತ್ತು ಪೋಸ್ಟರ್ ಅಂಟಿಸುವ ಕೆಲಸವನ್ನು ನಿಯೋಜಿಸಲಾಗಿತ್ತು. ಶರಣಾಗಿರುವ ಇವರಿಗೆ ತಲಾ ₹25,000 ಸಹಾಯಧನ ಮತ್ತು ಪುನರ್ವಸತಿ ಕಲ್ಪಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಮೂಲಕ 2020ರ ಜೂನ್ ತಿಂಗಳಿನಲ್ಲಿ ಆರಂಭಿಸಲಾದ 'ನಿಮ್ಮ ಮನೆಗೆ ಹಿಂದಿರುಗಿ' ಎಂಬ ಅಬಿಯಾನದ ಮೂಲಕ ಈವರೆಗೆ ಒಟು 815 ನಕ್ಸಲರು ಹಿಂಸಾಚಾರ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ.ಇವರಲ್ಲಿ 180 ಮಂದಿಯ ತಲೆಗೆ ಬಹುಮಾನ ಘೋಷಿಸಲಾಗಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries