HEALTH TIPS

ಚಂಡೀಗಢ: ನವೀನ್‌ ಜಿಂದಾಲ್‌ ನಾಮಪತ್ರ ಸಲ್ಲಿಕೆ

 ಚಂಡೀಗಢ: ಬಿಜೆಪಿಯ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಉದ್ಯಮಿ ನವೀನ್‌ ಜಿಂದಾಲ್‌ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ಹರಿಯಾಣ ಮುಖ್ಯಮಂತ್ರಿ ನಾಯಬ್‌ ಸಿಂಗ್‌ ಸೈನಿ ಅವರು ಈ ವೇಳೆ ಜತೆಗಿದ್ದರು. ಕಾಂಗ್ರೆಸ್‌ನಲ್ಲಿದ್ದ ಜಿಂದಾಲ್‌, ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದರು.

ಅವರು 2004-2014ರ ಅವಧಿಯಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ಸಂಸದರಾಗಿದ್ದರು.

ಜಿಂದಾಲ್‌ ಅವರು ಈ ಬಾರಿ ಐಎನ್‌ಎಲ್‌ಡಿಯ ಹಿರಿಯ ನಾಯಕ ಅಭಯ್‌ ಸಿಂಗ್‌ ಚೌಟಾಲಾ ಮತ್ತು ಎಎಪಿಯ ಸುಶೀಲ್‌ ಗುಪ್ತಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಸಂಬಲ್‌ಪುರ (ಒಡಿಶಾ) ವರದಿ: ಬಿಜೆಪಿಯ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್‌ ಅವರು ಒಡಿಶಾದ ಸಂಬಲ್‌ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ಒಮರ್‌ ಅಬ್ದುಲ್ಲಾ ನಾಮಪತ್ರ (ಶ್ರೀನಗರ ವರದಿ): ನ್ಯಾಷನಲ್‌ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಗುರುವಾರ ನಾಮಪತ್ರ ಸಲ್ಲಿಸಿದರು.

‍ಒಮರ್‌ ಅವರು ಪೀಪಲ್ಸ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಸಜ್ಜಾದ್‌ ಲೋನ್‌ ಮತ್ತು ಪಿಡಿಪಿಯ ಮೀರ್‌ ಫಯಾಜ್ ಅವರ ಸವಾಲು ಎದುರಿಸಲಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries