HEALTH TIPS

ಚಾಲನಾ ಪರೀಕ್ಷೆ ಸುಧಾರಣೆ ವಿವಾದ: ಮುಷ್ಕರ ಅಂತ್ಯಗೊಳಿಸಿದ ಸಿಐಟಿಯು

               ತಿರುವನಂತಪುರಂ: ಚಾಲನಾ ಪರೀಕ್ಷೆ ಸುಧಾರಣೆ ವಿರೋಧಿಸಿ ನಡೆಸುತ್ತಿದ್ದ ಮುಷ್ಕರವನ್ನು ಸಿಐಟಿಯು ತಾತ್ಕಾಲಿಕವಾಗಿ ಅಂತ್ಯಗೊಳಿಸಿದ್ದು, ಸೋಮವಾರದಿಂದ ಚಾಲನಾ ಪರೀಕ್ಷೆಗೆ ಸಹಕರಿಸಲಿದೆ.

                ಸುಧಾರಣೆಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಸುತ್ತೋಲೆ ಹಿಂಪಡೆದು ರಿಯಾಯಿತಿಯೊಂದಿಗೆ ಹೊಸ ಸುತ್ತೋಲೆ ಬಿಡುಗಡೆ ಹಿನ್ನೆಲೆಯಲ್ಲಿ ಮುಷ್ಕರ ನಿಲ್ಲಿಸಲಾಗಿದೆ. ಮುಷ್ಕರದಿಂದಾಗಿ ರಾಜ್ಯದಲ್ಲಿ ಚಾಲನಾ ಪರೀಕ್ಷೆ ಸ್ಥಗಿತಗೊಂಡಿದೆ.

             ಸಿಐಟಿಯು ರಾಜ್ಯ ಕಾರ್ಯದರ್ಶಿ ಎಳಮರಮ್ ಕರೀಂ ಅವರು ಸಾರಿಗೆ ಸಚಿವ ಗಣೇಶ್ ಕುಮಾರ್ ಅವರೊಂದಿಗೆ ಚಾಲನಾ ಪರೀಕ್ಷೆ ಸುಧಾರಣೆ ಕುರಿತು ಮಾತುಕತೆ ನಡೆಸಲಿದ್ದಾರೆ

             ಇದೇ ತಿಂಗಳ 23ರಂದು ಚರ್ಚೆ ನಡೆಯಲಿದೆ. ಚರ್ಚೆಯಲ್ಲಿ ಯಾವುದೇ ತೀರ್ಮಾನವಾಗದಿದ್ದರೆ, ಅದು ಇತರ ಮುಷ್ಕರ ಕಾರ್ಯಕ್ರಮಗಳತ್ತ ನುಗ್ಗಲಿದೆ. ಸೆಕ್ರೆಟರಿಯೇಟ್ ಎದುರು ಸೇರಿದಂತೆ ಪ್ರತಿಭಟನೆ ನಡೆಸಲಾಗುವುದು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries