HEALTH TIPS

ಪ್ರತಿಭಟನೆ ಸೂಚನೆ ನೀಡಿದ ಸಂಸ್ಕøತ ಶಿಕ್ಷಕರ ಒಕ್ಕೂಟ

                  ಪಟ್ಟಾಂಬಿ: ಸಂಸ್ಕೃತ ಶಿಕ್ಷಣದ ಅವ್ಯವಸ್ಥೆ ಹಿನ್ನೆಲೆಯಲ್ಲಿ ಪ್ರಬಲ ಆಂದೋಲನ ನಡೆಸಲು ಕೇರಳ ಸಂಸ್ಕೃತ ಶಿಕ್ಷಕರ ಒಕ್ಕೂಟ ನಿರ್ಧರಿಸಿದೆ.

                   ವಿಶೇಷ ಅಧಿಕಾರಿ, ಎಸ್‍ಸಿಆರ್‍ಟಿ, ಸಂಶೋಧನಾ ಅಧಿಕಾರಿ ಮತ್ತು ಪಠ್ಯಕ್ರಮ ಸಮಿತಿ ಸದಸ್ಯರ ಹುದ್ದೆಗಳು ಖಾಲಿ ಇವೆ. ಇದರಿಂದ ಪಠ್ಯಪುಸ್ತಕ ಚಟುವಟಿಕೆಗಳು, ಸಂಸ್ಕೃತ ಅಕಾಡೆಮಿಕ್ ಕೌನ್ಸಿಲ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ಬಾರಿ ಯೋಜನಾ ನಿಧಿಯನ್ನೂ ಸರ್ಕಾರ ಕಡಿತಗೊಳಿಸಿದೆ ಎಂದು ಸಭೆ ಗಮನಕ್ಕೆ ತಂದಿದೆ. 

                    ರಾಜ್ಯ ನಾಯಕತ್ವ ಶಿಬಿರ ವಿ. ವಿಜಯನ್ ಪಟ್ಟಾಂಬಿ ಉದ್ಘಾಟಿಸಿದರು. ಸಿ.ಪಿ. ಸನಲ್ ಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಡಾ. ಪಿ. ಪದ್ಮನಾಭನ್, ಜಯರಾಜ್ ಕೊಟ್ಟಾರಂ, ಸುರೇಶ್ ಕುಮಾರ್, ಬಾಬುರಾಜ್ ಎಳುವಂತಲ, ಟಿ.ಕೆ. ಸಂತೋಷ್ ಕುಮಾರ್ ತರಗತಿ ನಡೆಸಿದರು. ಸಮಾರೋಪ ಸಮಾರಂಭದಲ್ಲಿ ಡಾ. ಪಿ.ವಿ. ರಾಮನಕುಟ್ಟಿ ಉದ್ಘಾಟಿಸಿದರು. ಸಿ. ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಿ.ಪಿ. ಸುರೇಶ್ ಬಾಬು, ಡಾ. ವಿ.ಕೆ. ರಾಜಕೃಷ್ಣ ಮಾತನಾಡಿದರು. ಡಾಕ್ಟರೇಟ್ ಪಡೆದ ಪಿ. ಪದ್ಮನಾಭನ್ ಮತ್ತು ಡಾ. ಎಂ.ವಿ. ವಿವೇಕ್ ಅವರನ್ನು ಸನ್ಮಾನಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries