HEALTH TIPS

ಮಹಾರಾಷ್ಟ್ರ : ಹುಲಿಗಳ ಸಂಚಾರಕ್ಕೆ ಅಡ್ಡಿ: ತಡೋಬಾ ಅಂಧಾರಿಯಲ್ಲಿ ಸಫಾರಿ ಸ್ಥಗಿತ

          ಚಂದ್ರಾಪುರ : ಹುಲಿಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ ಮಹಾರಾಷ್ಟ್ರದ ತಡೋಬಾ ಅಂಧಾರಿ ಹುಲಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ 10 ಮಂದಿ ಮಾರ್ಗದರ್ಶಕರನ್ನು ಅಮಾನತು ಮಾಡಲಾಗಿದ್ದು, ಸಫಾರಿ ಸೇವೆಯನ್ನೂ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

           ಮೇ 17 ರಂದು ಜಂಗಲ್ ಸಫಾರಿ ವೇಳೆ ಚಂದ್ರಾಪುರದ ಮೀಸಲು ಪ್ರದೇಶದಲ್ಲಿ ಹುಲಿ T-114 ರ ಸಂಚಾರಕ್ಕೆ ಕೆಲವು ವಾಹನಗಳು ಅಡ್ಡಿಪಡಿಸಿವೆ ಎನ್ನಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ 10 ಜನ ಮಾರ್ಗದರ್ಶಿಗಳು ಮತ್ತು 10 ಸಫಾರಿ ವಾಹನಗಳ ಸೇವೆಗಳನ್ನು ಭಾನುವಾರದಿಂದ ಒಂದು ತಿಂಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಮೀಸಲು ಪ್ರದೇಶದ ನಿರ್ದೇಶಕ ಕುಶಾಗ್ರಾ ಪಾಠಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

               ಇಂತಹ ಘಟನೆಗಳು ಹೆಚ್ಚಾಗಿ ಸಂಭವಿಸುವ ಮೀಸಲು ಪ್ರದೇಶದ ಕೆಲವು ಪ್ರದೇಶಗಳಲ್ಲಿ ಪ್ರವಾಸಿಗರ ಭೇಟಿ ನಿಷೇಧಿಸಲು ಆಡಳಿತವು ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries