ಕಾಸರಗೋಡು: ಕಳೆದ ತಿಂಗಳುಗಳಿಂದ ವ್ಯಾಪಕವಾದ ಉಷ್ಣ ಏರಿಕೆ, ಹವಾಮಾನ್ ವೈಪರೀತ್ಯಗಳಿಂದ ಎಲ್ಲೆಡೆ ಜೀವಜಾಲಗಳು ಹೈರಾಣಗೊಂಡಿರುವ ಮಧ್ಯೆ ಕಳೆದ ಎರಡು ದಿನಗಳಿಂದ ಜಿಲ್ಲೆಯ ಹಲವೆಡೆ ವ್ಯಾಪಕ ಬೇಸಿಗೆ ಮಳೆಯಾಗಿದೆ.
ಶನಿವಾರ ಜಿಲ್ಲೆಯ ಅಲ್ಲಲ್ಲಿ ಮಿತ ಪ್ರಮಾಣದ ಮಳೆಯಾಗಿದ್ದರೂ ನಿನ್ನೆ(ಭಾನುವಾರ) ಸಂಜೆ ಅರ್ಧ ಗಂಟೆಗೂ ಹೆಚ್ಚುಕಾಲ ಸಿಡಿಲು-ಮಿಂಚಿನಾರ್ಭಟ, ಗಾಳಿಯಿಂದೊಡಗೂಡಿದ ಮಳೆಯಾಗಿದೆ. ಈ ಮೂಲಕ ರಾತ್ರಿ ವೇಳೆ ಉಷ್ಣತೆಯಲ್ಲಿ ಕುಸಿತವಾಗಿದ್ದು, ನಿರಾಳತೆ ಮನೆಮಾಡಿತು.
ಇಂದು ಹಾಗೂ ನಾಳೆಯೂ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ.