HEALTH TIPS

ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ಹಿರಿಯ IPS ಅಧಿಕಾರಿ ಕೃಷ್ಣ, ವೇಣುಗೋಪಾಲ್ ನೇಮಕ

           ವದೆಹಲಿ: ಹಿರಿಯ ಐಪಿಎಸ್‌ ಅಧಿಕಾರಿಗಳಾದ ಎ.ವೈ.ವಿ. ಕೃಷ್ಣ ಮತ್ತು ಎನ್‌. ವೇಣುಗೋಪಾಲ್ ಅವರು ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

            ಇವರಿಬ್ಬರೂ 1995ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಗಳಾಗಿದ್ದು, ಎ.ವೈ.ವಿ. ಕೃಷ್ಣ ಅವರು(ಅಸ್ಸಾಂ-ಮೇಘಾಲಯ ಕೇಡರ್‌) ಪ್ರಸ್ತುತ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯಲ್ಲಿ(ಸಿಆರ್‌ಪಿಎಫ್‌) ಮಹಾ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

           ವೇಣುಗೋಪಾಲ್‌ ಅವರು(ಹಿಮಾಚಲ ಪ್ರದೇಶ ಕೇಡರ್‌) ಪ್ರಸ್ತುತ ಸಿಬಿಐನ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

                  ಕೃಷ್ಣ ಅವರು ಆ.6, 2028ರ ವರೆಗೆ ಹಾಗೂ ವೇಣುಗೋಪಾಲ್‌ ಅವರು ಮೇ 24, 2027ರ ವರೆಗೆ ಸಿಬಿಐನ ಹೆಚ್ಚುವರಿ ನಿರ್ದೇಶಕ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಆಡಳಿತ ಮತ್ತು ಸಿಬ್ಬಂದಿ ಸಚಿವಾಲಯವು ತನ್ನ ಪ್ರತ್ಯೇಕ ಆದೇಶಗಳಲ್ಲಿ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries