HEALTH TIPS

ಗಗನಕ್ಕೇರುತ್ತಿರುವ ತರಕಾರಿ ಬೆಲೆ; ಬೀನ್ಸ್, ಪಪ್ಪಾಯಿ, ಶುಂಠಿ ಮತ್ತು ಸಾಂಬಾರ ಪದಾರ್ಥಗಳ ಬೆಲೆ 100ಕ್ಕಿಂತಲೂ ಮೇಲಕ್ಕೇರಿಕೆ

              ತಿರುವನಂತಪುರಂ: ಕಾಸರಗೋಡು ಜಿಲ್ಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಬೀನ್ಸ್, ಪಡುವಲ-ಹಾಗಲಕಾಯಿ, ಶುಂಠಿ ಇತ್ಯಾದಿಗಳ ಬೆಲೆ 100 ರೂ.ಗಿಂತಲೂ ಹೆಚ್ಚು ಏರಿಕೆಯಾಗಿದೆ.

              35 ರೂ. ಇದ್ದ ಟೊಮೆಟೊ ಬೆಲೆ 80 ರೂ.ಗೆ ಏರಿದೆ. ಮುಂದಿನ ದಿನಗಳಲ್ಲಿಯೂ ಬೆಲೆ ಏರಿಕೆ ಮುಂದುವರಿಯುವ ಸೂಚನೆಯನ್ನು ಮಾರುಕಟ್ಟೆ ನೀಡುತ್ತಿದೆ. ಮೀನು, ಮಾಂಸದ ಬೆಲೆ ಏರಿಕೆಯ ಬೆನ್ನಲ್ಲೇ ತರಕಾರಿ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವುದು ಶ್ರೀಸಾಮಾನ್ಯನ ಕುಟುಂಬದ ಬಜೆಟ್ ಅಸ್ತವ್ಯಸ್ತಗೊಳಿಸಿದೆ.

              ಎರಡು ವಾರಗಳ ಹಿಂದೆ ಇದ್ದ ತರಕಾರಿ ಬೆಲೆ ಈಗ ದುಪ್ಪಟ್ಟಾಗಿದೆ. ಇನ್ನೆರಡು ವಾರ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಾರ್ಟಿಕಾರ್ಪ್ ಮತ್ತು ಸರ್ಕಾರ ಅಂದಾಜಿಸುತ್ತಿದೆ. ಈರುಳ್ಳಿ, ಬೀನ್ಸ್ ಸೇರಿದಂತೆ ತರಕಾರಿಗಳ ಬೆಲೆ 10 ರಿಂದ 25 ರೂ. ವರೆಗೆ ಹೆಚ್ಚಳಗೊಂಡಿದೆ. ದೊಡ್ಡ ಈರುಳ್ಳಿ ಕೆಜಿಗೆ 50, ಸಣ್ಣ ಈರುಳ್ಳಿ ಕೆಜಿಗೆ 80 ರೂ ಬೆಲೆಯಿದ್ದು, ಎರಡು ವಾರಗಳ ಹಿಂದೆ 15 ರೂಪಾಯಿ ಇದ್ದ ಬೆಲೆ ಈಗ 25 ರೂಪಾಯಿಗೆ ಏರಿಕೆಯಾಗಿದೆ. 25 ರೂ.ಗೆ ಇದ್ದ ಬದನೆ 40 ರೂ.ಗೆ ಏರಿದೆ. 40 ರೂ.ಗಳಿಗೆ ಮಾರಾಟವಾಗುತ್ತಿದ್ದ ದೀವೀ ಹಲಸಿನ ಪ್ರಸ್ತುತ ಬೆಲೆ 60 ರೂ.ಗಳಿಗಿಂತಲೂ ಹೆಚ್ಚಿದೆ.

               25 ರೂ.ಬೆಲೆಯಿದ್ದ ಬೆಂಡೆಕಾಯಿ 45 ರೂ.ಗೆ ತಲುಪಿದೆ. 30 ರೂ.ಗೆ ಇದ್ದ ಚಿಟsಒತಿe  80 ರೂ.ಗೆ ಏರಿಕೆಯಾಗಿದೆ. ಪಕ್ಕದ ರಾಜ್ಯಗಳಿಂದ ತರಕಾರಿ ಆಮದು  ಕಡಿಮೆ ಆಗಿರುವುದು ಸದ್ಯದ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಂದ ಕೇರಳಕ್ಕೆ ತರಕಾರಿಗಳ ಆಗಮನ ಗಣನೀಯವಾಗಿ ಕಡಿಮೆಯಾಗಿದೆ. ಮುಂಗಾರು ಆಗಮನದೊಂದಿಗೆ ಸ್ಥಳೀಯ ಉತ್ಪಾದನೆಗೂ ಹಿನ್ನಡೆಯಾಗಿದೆ.

             ತರಕಾರಿ ಜತೆಗೆ ಮಸಾಲೆ, ಧಾನ್ಯಗಳ ಬೆಲೆಯೂ ಗಗನಮುಖಿಯಾಗಿದೆ. ಪ್ರಸ್ತುತ ತೊಗರಿ ಬೇಳೆ ಕೆಜಿಗೆ 170-190 ರೂ., ಸಣ್ಣ ಕಡಲೆ 150 ರೂ., ದೊಡ್ಡ ಕಡಲೆ 110 ರೂ., ಬಾಳೆಕಾಯಿ 150 ರೂ., ಹಸಿ ಅವರೆ 110 ರೂ., ಕಡಲೆ 125 ರೂ. ಟ್ರಾಲಿಂಗ್ ನಿಷೇಧದಿಂದಾಗಿ ಮೀನು ದರವೂ ದುಬಾರಿಯಾಗಿದೆ.

                   ಸ್ಥಳೀಯ ಮಾರುಕಟ್ಟೆಯಲ್ಲಿ ಸಾರ್ಡೀನ್ ಬೆಲೆ 400 ದಾಟಿದೆ. ಟ್ರಾಲಿಂಗ್ ನಿಷೇಧ ಮುಗಿಯುವವರೆಗೂ ಬೆಲೆ ಏರಿಕೆ ಮುಂದುವರಿಯಲಿದೆ. ಮೀನಿನ ಕೊರತೆಯಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿ ಒಣಮೀನಿನ ಬೆಲೆಯೂ ಏರುತ್ತಿದೆ. 


                    ಅಭಿಮತ:: ವಾಡಿಕೆಯಂತೆ ಮಳೆಗಾಲದ ಆರಂಭವಾಗಿರುವುದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಆದರೆ ಈ ಬಾರಿ ಹೆಚ್ಚಳದ ಮಟ್ಟ ಹೆಚ್ಚಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಹೊಡೆತವಾಗಲಿದ್ದು, ಊಟ-ತಿಂಡಿತಿನಸುಗಳ ಬೆಲೆ ಹೆಚ್ಚಳ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಅಧಿಕೃತರು ಮಲೇಗಾಲದ ಆರಂಭದಲ್ಲಾಗುವ ತರಕಾರಿ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು.

                                     -ಶ್ಯಾಮಕೃಷ್ಣ ಭಟ್.

                                   ಹೋಟೆಲ್ ಮ್ಹಾಲಕರು. 

                                    ಹೋಟೆಲ್ ದುರ್ಗಾಭವನ ನೀರ್ಚಾಲು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries