HEALTH TIPS

ರೈಲ್ವೆ ಸಿಗ್ನಲ್ ಕೇಬಲ್ ಕಡಿದ ಇಬ್ಬರ ಬಂಧನ: 10 ರೈಲುಗಳ ಸಂಚಾರ ಮೊಟಕುಗೊಳಿಸಿ ಅವ್ಯವಸ್ಥೆ ಸೃಷ್ಟಿ

               ಕೋಝಿಕ್ಕೋಡ್: ಪೂವಾದನ್ ಗೇಟ್‍ನಲ್ಲಿ ರೈಲ್ವೆ ಸಿಗ್ನಲ್ ಕೇಬಲ್‍ಗಳನ್ನು ಕತ್ತರಿಸಿದ ಘಟನೆಯಲ್ಲಿ ಅಸ್ಸಾಂನ ಇಬ್ಬರನ್ನು ಬಂಧಿಸಲಾಗಿದೆ.

           ಕೂಲಿ ಕಾರ್ಮಿಕರಾದ ಮನೋವರ್ ಅಲಿ ಮತ್ತು ಅಬ್ಬಾಸ್ ಅಲಿ ಅವರನ್ನು ಬಂಧಿಸಲಾಗಿದೆ. ರೈಲುಗಳಿಗೆ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಆರ್‍ಪಿಎಫ್ ಅಧಿಕಾರಿಗಳು ತನಿಖೆ ನಡೆಸಿ ಅವರನ್ನು ಬಂಧಿಸಿರುವರು. .

         ಕೇಬಲ್ ಕಡಿತಗೊಂಡ ನಂತರ, ಸಿಗ್ನಲ್ ಕೊರತೆಯಿಂದ ವಡಕರ ಮತ್ತು ಮಾಹಿ ನಡುವೆ ಸುಮಾರು 10 ರೈಲುಗಳು ವಿಳಂಬಗೊಂಡವು. ಬಳಿಕ ಪೂವಾಡನ್ ಗೇಟ್ ನಲ್ಲಿ ಸಿಗ್ನಲ್ ಕೇಬಲ್ ಕಡಿದಿರುವ  ಬಗ್ಗೆ ಸಿಆರ್ ಪಿಎಫ್ ಗೆ ಮಾಹಿತಿ ಸಿಕ್ಕಿತ್ತು. ಇಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಮೊನವರ್ ಅಲಿ ಯನ್ನು ಗಮನಿಸಿದರು.  ವಿಚಾರಣೆ ವೇಳೆ ಆತನ ಬ್ಯಾಗ್‍ನಲ್ಲಿ ಕೇಬಲ್‍ನ ಒಂದು ಭಾಗ ಪತ್ತೆಯಾಗಿದೆ.

           ಆತ ಮತ್ತು ಆತನ ಸ್ನೇಹಿತ ವಡಕರ ಪರವಂತಲ ಸಮೀಪದ ಹಳೆಮನೆಯಲ್ಲಿ ಕೂಲಿಗೆಲಸ ಮಾಡುತ್ತಿದ್ದರು. ಮನೆಯಲ್ಲಿ ಶೋಧ ನಡೆಸಿದಾಗ ಕೇಬಲ್‍ನ ಮತ್ತೊಂದು ಭಾಗ ಮತ್ತು ಅದನ್ನು ಕತ್ತರಿಸಲು ಬಳಸಿದ ಆಕ್ಸೋ ಬ್ಲೇಡ್ ಪತ್ತೆಯಾಗಿದೆ. ಘಟನೆಯಲ್ಲಿ ಅಬ್ಬಾಸ್ ಅಲಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries