HEALTH TIPS

ಲೋಕ ಅದಾಲತ್: 169 ಪ್ರಕರಣಗಳು ಇತ್ಯರ್ಥ


            ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಕಾಸರಗೋಡು ನ್ಯಾಯಾಲಯ ಸಂಕೀರ್ಣದಲ್ಲಿ ನಡೆಯಿತು. ಆದಾಲತ್‍ನಲ್ಲಿ 101 ಮೋಟಾರು ಅಪಘಾತ ಅಪರಾಧ ಪ್ರಕರಣಗಳನ್ನು ಪರಿಗಣಿಸಿ,  2,64,54,694 ರೂ. ಪರಿಹಾರ ಕಲ್ಪಿಸಲಾಯಿತು.  ವಿವಿಧ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಅಸ್ತಿತ್ವದಲ್ಲಿರುವ 169 ಪ್ರಕರಣಗಳಿಗೆ ಸಂಬಂಧಿಸಿ 4,59,602 ರೂ. ದಂಡ ವಸೂಲಿ ನಡೆಸಲಾಯಿತು.  12 ಬ್ಯಾಂಕ್ ವಂಚನಾ ಪ್ರಕರಣಗಳಲ್ಲಿ 10,35000 ಮೊತ್ತದ ವಸೂಲಾತಿ ನಡೆಸಲಾಗಿದ್ದರೆ,  ಕಾಲಾವಧಿ ಕಳೆದ ಪ್ರಕರಣಕ್ಕೆ ಸಂಬಂಧಿಸಿ 21,366 ರೂ. ವಸೂಲಿ ನಡೆಸಲಾಯಿತು.   ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ 2 ಬ್ಯಾಂಕ್ ವಸೂಲಾತಿ ಪ್ರಕರಣದಲ್ಲಿ 41,00,000 ಮೊತ್ತ ವಸೂಲಿ ನಡೆಸಲಾಗಿದೆ. 4 ವ್ಯಾಜ್ಯ ಪೂರ್ವ ದೂರುಗಳನ್ನು ಇತ್ಯರ್ಥಪಡಿಸಲಾಯಿತು. ಕಾಸರಗೋಡು ಜಿಲ್ಲಾ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮತ್ತು ಅಧ್ಯಕ್ಷರಾದ ಸಾನು ಎಸ್ ಪಣಿಕ್ಕರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ (ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗ) ಮರಿಯಮ್ ಸಲೋಮಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎ.ಮನೋಜ್ ನೇತೃತ್ವ ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries