ಕುಂಬಳೆ: ಐದು ವರ್ಷಕ್ಕೊಮ್ಮೆ ನಡೆಯುವ ಸುಪ್ರಸಿದ್ಧ ಕುಂಬೋಳ್ ಸೈಯದ್ ಅರಬಿ ವಲಿಯುಲ್ಲಾಹಿ(ರ) ಕುಂಬೋಳ್ ಮಖಾಂ ಉರೂಸ್ ಜ.16ರಿಂದ 26ರವರೆಗೆ ನಡೆಯಲಿದ್ದು,ಈ ಸಂಬಂಧ ಸಂಘಟನಾ ಸಮಿತಿ ಕಚೇರಿಯನ್ನು ಆರಿಕ್ಕಾಡಿಯಲ್ಲಿ ಶನಿವಾರ ಕುಂಬೋಲ್ ಮುದರಿಸ್ ಉಸ್ತಾದ್ ಅಬ್ದುಲ್ ರಝಾಕ್ ಫೈಝಿ ಅಲ್ ಮುರ್ಷಿದಿ ಉದ್ಘಾಟಿಸಿದರು. ಸೈಯದ್ ಯಾಹ್ಯಾ ತಂಙಳ್ ಅಲ್ ಹಾದಿ ಕುಂಬೋಲ್ ಪ್ರಾರ್ಥನೆ ನೆರವೇರಿಸಿದರು.
ಜಮಾಅತ್ ಅಧ್ಯಕ್ಷ ಪಿ.ಕೆ.ಮುಸ್ತಫಾ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಕೆ.ಪಿ.ಶಾಹುಲ್ ಹಮೀದ್, ಉರೂಸ್ ಸಮಿತಿ ಅಧ್ಯಕ್ಷ ಎಂ.ಅಬ್ಬಾಸ್, ಜಮಾಅತ್ ಪ್ರಧಾನ ಕಾರ್ಯದರ್ಶಿ ಎ.ಮುಹಮ್ಮದ್ ಕುಂಞÂ್ಞ, ಹಾಜಿ ಹುಸೈನ್ ದರ್ವೇಶ್, ಮುಹಮ್ಮದ್ ಹಾಜಿ ಕೋರಿಕಂಡ, ಡಿ.ಮುಹಮ್ಮದ್ ಫೈಝಿ, ಬಿ.ಎ.ರಹ್ಮಾನ್ ಆರಿಕ್ಕಾಡಿ, ಎ.ಕೆ.ಆರಿಫ್, ಮುಹಮ್ಮದ್ ಹಾಜಿ ಮಂಗಲ್ಪಾಡಿ, ಅನ್ವರ್ ಆರಿಕ್ಕಾಡಿ, ರಶೀದ್ ಹಾಜಿ, ಸಿದ್ದೀಕ್ ಪುಜೂರ್, ಎಂ.ಎಚ್.ಕಾದರ್, ಎ.ಕೆ.ಮುಹಮ್ಮದ್, ರಝಾಕ್ ಪಡಿಂಜಾರ್, ಹಮೀದ್ ಬಾಪು, ಮೊಯ್ತೀನ್ ಕುಂಬೋಳ್, ರಫೀಕ್ ಅಬ್ಬಾಸ್, ಲತೀಫ್ ಕುಂಬೋಳ್, ಅಶ್ರಫ್ ಸಿರಾಂಗ್, ಕೆ.ಅಬೂಬಕರ್, ಅಬ್ದುಲ್ಲ ಹಾಜಿ ಬಲ್ಲಂಗುಡೇಲು, ಸಾಕಿರ್, ಅಜೀಜ್ ಕೆ.ಎಂ, ಫೈಸಲ್ ಕುಂಬೋಳ್, ಅಶ್ರಫ್, ಅಬ್ಬಾಸ್, ಫಾರೂಕ್ ಪಳ್ಳಿ, ಮೂಸಾ, ಮೊದಲಾದವರಿದ್ದರು.