HEALTH TIPS

ರಸ್ತೆಯಲ್ಲೆಲ್ಲ ಹೊಂಡಗಳು; ಪ್ರಯಾಣ ಮಾರ್ಗ ಬದಲಿಸಿದ ಮುಖ್ಯಮಂತ್ರಿ; 24 ಕಿ.ಮೀ ಬದಲಿಗೆ 40 ಕಿ.ಮೀ ಸಂಚಾರ

                   ತ್ರಿಶೂರ್: ರಸ್ತೆ ಗುಂಡಿಗಳ ಭೀತಿಯಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾರ್ಗ ಬದಲಿಸಿ ಸಂಚರಿಸಿದರು. ಮುಖ್ಯಮಂತ್ರಿಗಳು ನಿನ್ನೆ ಕುಟಿಪ್ಪುರಂ ರಾಜ್ಯ ಹೆದ್ದಾರಿಯನ್ನು ತಪ್ಪಿಸಿ ವಡಕಂಚೇರಿ ಮಾರ್ಗವಾಗಿ ತ್ರಿಶೂರ್ ರಾಮ್ ನಿಲಯಂ ತಲುಪಿದರು. ಗುಂಡಿ ತಪ್ಪಿಸಲು ಮುಖ್ಯಮಂತ್ರಿ 24 ಕಿ.ಮೀ ಬದಲಿಗೆ 40 ಕಿ.ಮೀ.ಕ್ರಮಿಸಿದರು.

            ಕುನ್ನಂಕುಳಂ ಚೂಂಡಲ್ ರಾಜ್ಯ ಹೆದ್ದಾರಿಯಲ್ಲಿನ ದೈತ್ಯ ಗುಂಡಿಗಳು ಮುಖ್ಯಮಂತ್ರಿಯವರನ್ನೂ ಭಯಭೀತಗೊಳಿಸಿದವು. ನಿನ್ನೆ ಕೋಝಿಕ್ಕೋಡ್‍ನಿಂದ ತ್ರಿಶೂರ್‍ಗೆ ಮುಖ್ಯಮಂತ್ರಿಯವರು ಸಂಚರಿಸಿದ್ದರು. ರಸ್ತೆಗುಂಡಿ ತಪ್ಪಿಸಲು 24 ಕಿ.ಮೀ ಬದಲು 40 ಕಿ.ಮೀ ಸುತ್ತುವ ಮೂಲಕ ಮುಖ್ಯಮಂತ್ರಿ ಮತ್ತು ಅವರ ತಂಡ ತ್ರಿಶೂರ್ ತಲುಪಿತು.

         ಪುಝುಕ್ಕಲ್‍ನಿಂದ ಕುನ್ನಂಕುಳಂ ವರೆಗಿನ ರಸ್ತೆಯಲ್ಲಿನ ಗುಂಡಿಗಳನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗವನ್ನು ತಪ್ಪಿಸಿರುವ ಮುಖ್ಯಮಂತ್ರಿಗಳ ಪ್ರಯಾಣ ಚರ್ಚೆಗೊಳಗಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚದಿರುವುದನ್ನು ವಿರೋಧಿಸಿ ಖಾಸಗಿ ಬಸ್ ಮಾಲೀಕರು ಇದೇ 26ರಂದು ಮುಷ್ಕರ ನಡೆಸುವುದಾಗಿಯೂ ಘೋಷಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries