ಬದಿಯಡ್ಕ: ನೀರ್ಚಾಲು ಸಮೀಪದ ಬೇಳ ಕೌಮುದಿ ಗ್ರಾಮೀಣ ನೇತ್ರಾಲಯದ 24ನೇ ವಾರ್ಷಿಕ ದಿನಾಚರಣೆ ನೇತ್ರಾಲಯದ ಪರಿಸರದಲ್ಲಿ ಭಾನುವಾರ ಜರಗಿತು. ಆಡಳಿತ ವ್ಯವಸ್ಥಾಪಕ ಡಾ. ಎನ್.ಸುನಿಲ್ ಅಧ್ಯಕ್ಷತೆ ವಹಿಸಿದ್ದರು. ಮಾಲಿಕ್ ದೀನರ್ ಕಾಲೇಜ್ ಒಫ್ ಗ್ರ್ಯಾಜುಯೆಟ್ ಸ್ಟಡೀಸ್ನ ಪ್ರಾಂಶುಪಾಲ ಪ್ರೊ.ಉದಯಕುಮಾರ್ ದೀಪಬೆಳಗಿಸಿ ಉದ್ಘಾಟಿಸಿದರು. ಡಾ. ರಾಕೇಶ್, ಡಾ. ವಿನಯ ಗೌಡ, ಮತ್ತು ಜನರಲ್ ಮ್ಯಾನೇಜರ್ ರಮಾಸುನಿಲ್ ಉಪಸ್ಥಿತರಿದ್ದರು. ರಶ್ಮಿ ಪ್ರಕಾಶ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವರನ್ನು ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ನ್ಯಾಯವಾದಿ ಅನಿಲ್ ಕುಮಾರ್ ಸ್ವಾಗತಿಸಿ, ಸ್ವಾತಿ ವಂದಿಸಿದರು. ಕಾವ್ಯ ಪ್ರಾರ್ಥಿಸಿ, ಚೈತ್ರಶ್ರೀ ನಿರೂಪಿಸಿದರು. ದೇಶಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.