ಕಾಸರಗೋಡು: ಕೇರಳ ರೈತರ ಕಲ್ಯಾಣ ಮಂಡಳಿಯ ಗ್ರಾಮ ಸಭೆಗಳು ಜೂ£ 25, 27ಹಾಗೂ 29 ರಂದು ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಗ್ರಾಮ ಸಭೆಗಳಲ್ಲಿ 18 ರಿಂದ 55 ವರ್ಷದೊಳಗಿನವರಿಗೆ ಸದಸ್ಯತ್ವ ಪಡೆಯಲು ಅವಕಾಶವಿರುತ್ತದೆ ಮತ್ತು ಪ್ರಸ್ತುತ ಸದಸ್ಯರಾಗಿರುವವರು ಪಾವತಿಸಲು ಬಾಕಿಯಿರು ಮೊತ್ತ ಪಾವತಿಸಿ ತಮ್ಮ ಸದಸ್ಯತ್ವ ನವೀಕರಿಸಲು ಅವಕಾಶ ಕಲ್ಪಿಸಲಾಗುವುದು. ಮೊತ್ತ ಪಾವತಿ ಬಾಕಿಯಿರುವ ಕಾರಣ ಸವಲತ್ತು ಲಭಿಸದಿರುವುದು, ಅರ್ಜಿ ಸಲ್ಲಿಕೆಗೆ ಉಂಟಾಗುವ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಜಾಗೃತಿ ತರಗತಿಯನ್ನೂ ನಡೆಸಲಾಗುವುದು.
ಜೂ.25ರಂದು ಬೆಳಗ್ಗೆ 10ಗಂಟೆಯಿಂದ ಚೆರುವತ್ತೂರು ಗ್ರಾಮದ ಗ್ರಾಮಸಭೆ ಪಂಚಾಯಿತಿ ಕಚೇರಿಯಲ್ಲಿ, ಜೂ.27ರಂದು ಚಿಮೇನಿ ಗ್ರಾಮದ ಗ್ರಾಮಸಭೆ ಚೀಮೇನಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ಜೂ.29ರಂದು ಕಯ್ಯೂರು ಗ್ರಾಮದ ಸಭೆ ಕಯ್ಯೂರು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ( 04672 207731, 9447479052)ಸಂಪರ್ಕಿಸುವಂತೆಪ್ರಕಟಣೆ ತಿಳಿಸಿದೆ.