ಮಂಜೇಶ್ವರ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಹಾಗೂ ಕೇರಳದಿಂದ ಸುರೇಶ್ ಗೋಪಿ ಹಾಗೂ ಜಾರ್ಜ್ ಕುರಿಯನ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರವನ್ನು ಬಿಜೆಪಿ ಮಂಜೇಶ್ವರ ಮಂಡಲ ವ್ಯಾಪ್ತಿಯಯಲ್ಲಿ ವಿವಿಧೆಡೆ ಸಂತಸದಿಂದ ಆಚರಿಸಿ ಸಂಭ್ರಮಿಸಲಾಯಿತು. ಮಂಜೇಶ್ವರದÀ ಹೊಸಂಗಡಿಯಲ್ಲಿ, ಮಿಂಜದ ಮಿಯಪದವು ಪೇಟೆಯಲ್ಲಿ, ಮಜೀರ್ ಪಳ್ಳ, ಮೊರತ್ತಣೆ, ಪೈವಳಿಕೆಯ ಬಾಯರ್ ಪದವು ಮುಂತಾದೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಮೆರವಣಿಗೆ ಮಾಡಿ ಬಿಜೆಪಿ ಕಾರ್ಯಕರ್ತರು ಆಚರಿಸಿದರು.
ಮಂಡಲಾಧ್ಯಕ್ಷ ಆದರ್ಶ್ ಬಿ ಎಂ, ಮುಖಂಡರಾದ ಯತಿರಾಜ್ ಶೆಟ್ಟಿ, ಹರಿಶ್ಚಂದ್ರ ಮಂಜೇಶ್ವರ, ನ್ಯಾಯವಾದಿ ನವೀನ್ ರಾಜ್, ಕೆ.ವಿ.ಭಟ್, ಎ.ಕೆ.ಕಯ್ಯಾರ್, ತುಳಸಿ ಕುಮಾರಿ, ನಿಶಾ ಭಟ್, ರಾಜ್ ಕುಮಾರ್, ದೂಮಪ್ಪ ಶೆಟ್ಟಿ, ಪದ್ಮನಾಭ ಕಡಪ್ಪರ, ನಾರಾಯಣ ನಾಯ್ಕ್, ವೇಣು ಬಾಯರ್, ಸದಾಶಿವ ಚೇರಾಲ್ ವಿವಿಧೆಡೆ ನೇತೃತ್ವ ನೀಡಿದರು.