HEALTH TIPS

ಕಾರಿನಲ್ಲಿ ಸಾಗಿಸುತ್ತಿದ್ದ 5ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನ ವಶ-ಆರೋಪಿ ಬಂಧನ


                ಕಾಸರಗೋಡು: ಕುಂಬಳೆ ಸನಿಹ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ, ಕೇರಳದಲ್ಲಿ ನಿಷೇಧಿಸಲಾಗಿರುವ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಧೂರು ಸನಿಹದ ಹಿದಾಯತ್‍ನಗರ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ವಶಪಡಿಸಿಕೊಂಡಿರುವ ತಂಬಾಕು ಉತ್ಪನ್ನದ ಮೌಲ್ಯ 5ಲಕ್ಷ ರೂ. ಅಂದಾಜಿಸಲಾಗಿದೆ. 

             ಕಾರಿನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಸಾಗಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣೆ ಎಸ್.ಐ ಟಿ.ಎಂ. ವಿಪಿನ್ ನೇತೃತ್ವದ ಪೊಲೀಸರ ತಂಡ ಕುಂಬಳೆ ಹೈಯರ್‍ಸೆಕೆಂಡರಿ ಶಾಲೆ ಸನಿಹ ಕಾರ್ಯಾಚರಣೆ ನಡೆಸಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ 3ಲಕ್ಷ ರು. ಮ್ವಲ್ಯದ ತಂಬಾಕು ಉತ್ಪನ್ನ ಸಾಗಾಟದ ಮಧ್ಯೆ ಅಬೂಬಕ್ಕರ್ ಸಿದ್ದಿಕ್‍ನನ್ನು ಪೊಲೀಸರು ಬಂಧಿಸಿದ್ದು, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ಅಬೂಬಕ್ಕರ್ ಸಿದ್ದಿಕ್ ಕರ್ನಾಟಕದಿಂದ ಭಾರಿ ಪ್ರಮಾಣದಲ್ಲಿ ತಂಬಾಕು ಉತ್ಪನ್ನ ಕಾಸರಗೋಡಿಗೆ ತಂದು ಪೂರೈಸುವ ಪ್ರಮುಖ ಕೊಂಡಿಯಾಗಿದ್ದನೆನ್ನಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries