HEALTH TIPS

ತಡರಾತ್ರಿವರೆಗೂ ನಡೆದ ಮತ ಎಣಿಕೆ: ಮರು ಎಣಿಕೆ ನಡೆದರೂ ಅಟ್ಟಂಗಲ್ ನಲ್ಲಿ ಪರಾಭವಗೊಂಡ ವಿ.ಮುರಳೀಧರನ್: ಅಡೂರ್ ಪ್ರಕಾಶ್ 684 ಅಂತರದಿಂದ ಗೆಲುವು

            ಅಟ್ಟಿಂಗಲ್: ತಡರಾತ್ರಿ ವರೆಗೂ ಮರು ಎಣಿಕೆ ನಡೆಸಿದರೂ ಅಟ್ಟಿಂಗಲ್ ನಲ್ಲಿ ಎಡಪಕ್ಷಗಳು ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಯುಡಿಎಫ್ ಅಭ್ಯರ್ಥಿ ಅಡೂರ್ ಪ್ರಕಾಶ್ 684 ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

         ಮೂರೂ ಮೋರ್ಚಾಗಳು 3 ಲಕ್ಷಕ್ಕೂ ಹೆಚ್ಚು ಮತ ಪಡೆದ ಕ್ಷೇತ್ರ ಅಟ್ಟಿಂಗಲ್.

          ಎಲ್ ಡಿಎಫ್ ನ ವಿ.ಜಾಯ್ ಹಾಗೂ ಕೇಂದ್ರ ಸಚಿವರೂ ಆಗಿರುವ ಎನ್ ಡಿಎ ಅಭ್ಯರ್ಥಿ ವಿ.ಮುರಳೀಧರನ್ ಕಣದಲ್ಲಿದ್ದರು. ಕೇರಳದ ಅತ್ಯುತ್ತಮ ತ್ರಿಕೋನ ಸ್ಪರ್ಧೆಗಳಲ್ಲಿ ಒಂದಾಗಿದೆ ಅಟ್ಟಿಂಗಲ್. ಕೊನೆಯ ಕ್ಷಣದವರೆಗೂ ಯಾರು ಗೆಲ್ಲುತ್ತಾರೆ ಎಂಬುದು ಊಹಿಸಲಾಗಿರಲಿಲ್ಲ.

             ಅಡೂರ್ ಪ್ರಕಾಶ್ 328051 ಮತ್ತು ವಿ ಜಾಯ್ 3,27,367 ಮತಗಳನ್ನು ಪಡೆದರು. ವಿ ಮುರಳೀಧರನ್ 3,11,779 ಮತಗಳನ್ನು ಪಡೆದರು. 902 ಅಮಾನ್ಯ ಮತಗಳನ್ನು ಮರು ಎಣಿಕೆ ಮಾಡಲಾಗಿದೆ. ಫಲಿತಾಂಶ ತಡವಾಗಿದ್ದರಿಂದ ಎಲ್ ಡಿಎಫ್ ಕಾರ್ಯಕರ್ತರು ಸೇರಿದಂತೆ ಎನ್.ಡಿ.ಎ ಕಾರ್ಯಕರ್ತರು ರಾತ್ರಿಯೂ ಎಣಿಕೆ ಕೇಂದ್ರದ ಮುಂದೆ ಭರವಸೆ ಕೈ ಬಿಡದೆ ಕಾದು ಕುಳಿತಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries