HEALTH TIPS

ವಾಚನಾ ವಾರಾಚರಣೆ, ಪಿ.ಎನ್.ಪಣಿಕ್ಕರ್ ಸಂಸ್ಮರಣೆ


               ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಷನ್ ಆಶ್ರಯದಲ್ಲಿ ಮಾವುಂಗಲ್ ರಾಮನಗರದ ಎಸ್‍ಆರ್‍ಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಾಚನಾ ವಾರಾಚರಣೆ ಹಾಗೂ ಪಿ.ಎನ್.ಪಣಿಕ್ಕರ್ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಯಿತು.

           ಕವಿ ದಿವಾಕರನ್ ವಿಷ್ಣುಮಂಗಲಂ ಸಮಾರಂಭ ಉದ್ಘಾಟಿಸಿದರು. ಅಜನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ಶೋಭಾ ಅಧ್ಯಕ್ಷತೆ ವಹಿಸಿದ್ದರು. ಸಾಕ್ಷರತಾ ಮಿಷನ್ ಮಾನಿಟರಿಂಗ್ ಸಂಯೋಜಕ ಶಾಜು ಜಾನ್ ವಾಚನಾ ಪ್ರಮಾಣ ವಚನ ಬೋಧಿಸಿದರು.  ಹಿರಿಯ ಕಲಿಕಾದಾರರನ್ನು ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಎಸ್ ಶ್ರೀಲತಾ ಅವರು ಗೌರವಿಸಿದರು.  ವಾರ್ಡ್ ಸದಸ್ಯ ಕೆ. ಶ್ರೀದೇವಿ. ಶಾಲಾ ಮುಖ್ಯೋಪಾಧ್ಯಾಯಿನಿ ದೀಪಾ ಟೀಚರ್ ಉಪಸ್ಥಿತರಿದ್ದರು.  ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ಸ್ವಾಗತಿಸಿದರು.  ಸಾಕ್ಷರತಾ ಪ್ರಚಾರಕಿ ನಾರಾಯಣಿ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries