HEALTH TIPS

ಕಾವ್ಯ ಸಮಾಜ ಮುಖಿಯಾಗಬೇಕು : ಕವಿ ಉಳಿಯತ್ತಡ್ಕ ಅಭಿಮತ

              ಬದಿಯಡ್ಕ : ಕಾವ್ಯ ಸಮಾಜಮುಖಿಯಾಗಬೇಕು. ಸಮಕಾಲಿಕ ಸ್ಥಿತಿಗತಿಗೆ ಸ್ಪಂದಿಸಿ ಸಾರ್ವಕಾಲಿಕ ಮೌಲ್ಯ ಪಡೆಯಬೇಕು ಕಾವ್ಯಪ್ರೀತಿ ಜನಾಂಗದ ಸಂಸ್ಕøತಿಯಾಗಿ ರೂಪುಗೊಳ್ಳಬೇಕು ಎಂದು ಕವಿ 'ಗಡಿನಾಡ  ಚೇತನ ' ಪ್ರಶಸ್ತಿ  ಪುರಸ್ಕøತ ರಾಧಾಕೃಷ್ಣ. ಕೆ. ಉಳಿಯತ್ತಡ್ಕ ಹೇಳಿದರು.

              ನಿವೃತ್ತ ಪ್ರಾಂಶುಪಾಲ ಪ್ರೊ. ಎ.ಶ್ರೀನಾಥ್ ಅವರ ಸ್ವಗೃಹ ಕೊಲ್ಲಂಗಾನದ ಅನಂತಶ್ರೀ ಯ ಸಪ್ತಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

               ಪರಮೇಶ್ವರ ನಾಯ್ಕ್ ಅರ್ತಲೆ, ಬಾಲ ಮಧುರಕಾನನ, ಶಂಕರ ಸ್ವಾಮಿಕೃಪಾ, ಎಂ.ಪಿ.ಜಿಲ್ ಜಿಲ್, ಪ್ರೇಮಚಂದ್ರನ್ ಚೊಂಬಾಲ, ರಾಘವನ್ ಬೆಳ್ಳಿಪ್ಪಾಡಿ, ವನಜಾಕ್ಷಿ ಚೆಂಬ್ರಕಾನ, ಪ್ರಸನ್ನ ಕುಮಾರಿ, ಸ್ನೇಹಲತಾ ದಿವಾಕರ್, ಚಂದ್ರಕಲಾ ನೀರಾಳ , ಶರಣ್ಯ ನಾರಾಯಣನ್, ಬಾಲಕೃಷ್ಣ ಬೇರಿಕೆ, ದಿವ್ಯಾಗಟ್ಟಿ ಪರಕ್ಕಿಲ, ಸುಂದರ ಬಾರಡ್ಕ ಸ್ವರಚಿತ ಕವನಗಳನ್ನು ವಾಚಿಸಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಲಾಯಿತು. ದಿವ್ಯಾಗಟ್ಟಿ ಪರಕ್ಕಿಲ ಮತ್ತು ಸುಂದರ ಬಾರಡ್ಕ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries