HEALTH TIPS

ಬಡಾಜೆ ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ

            ಮಂಜೇಶ್ವರ: ಬಡಾಜೆ ಶಾಲೆಯಲ್ಲಿ ಸಂಭ್ರಮದ ಪ್ರವೇಶೋತ್ಸವ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ  ಅಧ್ಯಕ್ಷ ಯಾದವ ಬಡಾಜೆ ಅಕ್ಷರ ದೀಪ ಬೆಳಗಿಸಿ ನೆರವೇರಿಸಿದರು. ನೂತನವಾಗಿ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ಬೆಲೂನ್ ಹಾಗೂ ಕಿರೀಟ ತೊಡಿಸಿ ಅಕ್ಷರ ದೀಪ ಬೆಳಗಿಸುವುದರೊಂದಿಗೆ ಸ್ವಾಗತಿಸಲಾಯಿತು. 

           ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೂಸ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಐಲ, ಯಂಗ್ ಮೆನ್ಸ್ ಅಸೋಸಿಯೇಷನ್ ಮಚ್ಚ0ಪಾಡಿ ಇದರ ಅಧ್ಯಕ್ಷ ಮೋಹಿದ್ದೀನ ಕುಂಞÂ್ಞ, ಮಾತೃ ಮಂಡಳಿ ಅಧ್ಯಕ್ಷ ನೆಶಿದಾ,ಸದಸ್ಯರಾದ ಖಲೀಲ್, ಕೆಬೀರ್, ರಹ್ಮಾನ್, ಉಪಾಧ್ಯಕ್ಷ ಶಶಿಕಲಾ, ದಯಾವತಿ, ಗೀತಾ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಂಗ್ ಮೆನ್ಸ್ ಅಸೋಸಿಯೇಷನ್ ಮಚ್ಚ0ಪಾಡಿ ವತಿಯಿಂದ ನೀಡಲಾದ ನೋಟ್ಸ್ ಪುಸ್ತಕ ಹಾಗೂ ಕಲಿಕಾ ಕಿಟ್ ಗಳನ್ನು ಶಾಲೆಯ ಎಲ್ಲಾ.ಮಕ್ಕಳಿಗೂ ವಿತರಿಸಲಾಯಿತು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶಿವಪ್ರಸಾದ್ ರಾವ್ ವಂದಿಸಿದರು. ಬಳಿಕ ಅಶೋಕ್ ಕೊಡ್ಲಮೊಗರು ಅವರು ರಕ್ಷಕರಿಗೆ "ರಕ್ಷಕ  ಜಾಗೃತಿ" ತರಗತಿ ನಡೆಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries