HEALTH TIPS

ನಾಪತ್ತೆಯಾಗಿದ್ದ ಎಸ್‍ಐ ವಾಪಸ್

               ಕೊಟ್ಟಾಯಂ: ನಾಪತ್ತೆಯಾಗಿದ್ದ ಪೋಲೀಸ್ ಅಧಿಕಾರಿ ಹಿಂತಿರುಗಿದ್ದಾರೆ. ಕೊಟ್ಟಾಯಂ ವೆಸ್ಟ್ ಪೋಲೀಸ್ ಠಾಣೆಯ ಗ್ರೇಡ್ ಎಸ್‍ಐ ರಾಜೇಶ್ ಹಿಂತಿರುಗಿರುವÀರು.

               ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ರಾಜೇಶ್ ಎಲ್ಲಿಗೆ ತೆರಳಿದ್ದರು ಎಂಬುದು ಬಹಿರಂಗವಾಗಿಲ್ಲ. ರಾಜೇಶ್ ನಾಪತ್ತೆಯಾಗಿದ್ದಾರೆ ಎಂದು ಕುಟುಂಬದವರು ಆಯರ್ಕುನ್ನಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

             ಮಾನಸಿಕ ಒತ್ತಡದ ಕಾರಣ ಬಿಟ್ಟು ಹೋಗಿರುವುದಾಗಿ ರಾಜೇಶ್ ಹೇಳಿಕೆ ನೀಡಿದ್ದಾರೆ. ಶುಕ್ರವಾರ ರಾತ್ರಿ ಕರ್ತವ್ಯ ಮುಗಿಸಿ ಶನಿವಾರ ಬೆಳಗ್ಗೆ ಕೊಟ್ಟಾಯಂ ವೆಸ್ಟ್ ಪೋಲೀಸ್ ಠಾಣೆಯಿಂದ ಮನೆಗೆ ತೆರಳಿದ್ದರು. ಆದರೆ ತಡರಾತ್ರಿ ಮನೆಗೆ ಆಗಮಿಸದಿದ್ದಾಗ ಸಂಬಂಧಿಕರು ಪೋಲೀಸರಿಗೆ ದೂರು ನೀಡಿದ್ದಾರೆ.

             ಮೊಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಟವರ್ ಹಿಂಬಾಲಿಸಿ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ತಾಯಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅವರಿಗೆ ಸಮಯಾವಕಾಶ ಬೇಕಿತ್ತು. ಆದರೆ ಚುನಾವಣಾ ಕೆಲಸಕ್ಕೆ ಸಂಬಂಧಿಸಿದಂತೆ ರಜೆ ಸಿಕ್ಕಿರಲಿಲ್ಲ. ಮತ ಎಣಿಕೆ ನಂತರ 15 ದಿನ ರಜೆ ಕೇಳಿ ಮೇಲಧಿಕಾರಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಧಿಕಾರಿಗಳು ರಜೆ ನಿರಾಕರಿಸಿದರು. ಇದಾದ ಬಳಿಕ ಹಲವು ದಿನಗಳ ಕಾಲ ಅವರು ಮಾನಸಿಕವಾಗಿ ನೊಂದಿದ್ದರು ಎಂದು ವರದಿಯಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries