ಕಾಸರಗೋಡು :ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕುಗಳು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿದ್ದು ಇಲ್ಲಿನ ಸರ್ಕಾರಿ ಕಛೇರಿಗಳ ಮೇಲಧಿಕಾರಿಗಳು ಕನ್ನಡಿಗರೇ ಆಗಿರಬೇಕೆಂಬ ಆದೇಶವಿದ್ದರೂ, ಇತ್ತೀಚೆಗೆ ಮುಖ್ಯೋಪಾಧ್ಯಾಯರ ಭಡ್ತಿಯಲ್ಲಿ ಕನ್ನಡೇತರರನ್ನು ನೇಮಕಾತಿಗೊಳಿಸಿರುವುದರ ಕ್ರಮವನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯು ತೀವ್ರವಾಗಿ ಖಂಡಿಸಿದೆ.
ಸಂಘಟನೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಬಾಕ್ರಬೈಲು, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ, ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಇವರ ನಿಯೋಗವು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ಮನವಿಯನ್ನು ನೀಡುವುದರೊಂದಿಗೆ ಖಂಡನೆಯನ್ನು ತಿಳಿಸಲಾಯಿತು .