HEALTH TIPS

ಬಿದ್ದು ಸಿಕ್ಕಿದ ಚಿನ್ನ ವಾರಸುದಾರರಿಗೆ ಹಸ್ತಾಂತರಿಸಿದ ಸರ್ಕಾರಿ ಉದ್ಯೋಗಿ


             ಕಾಸರಗೋಡು: ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ವಪಾಸುಮಾಡುವ ಮೂಲಕ ಸರ್ಕಾರಿ ಉದ್ಯೋಗಿಯೊಬ್ಬರು ಆದರ್ಶ ಮೆರೆದಿದ್ದಾರೆ. ಪಾಪಿನಶ್ಶೇರಿ ನಿವಾಸಿ ಹಾಗೂ ಕಾರಡ್ಕ ಬ್ಲಾಕ್ ಪಂಚಾಯತ್ ಕಚೇರಿಯ ಉದ್ಯೋಗಿ ಪಿ.ಶಾನವಾಸ್ ಚಿನ್ನ ವಆಪಾಸುಮಾಡಿದವರು.

            ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಚೆರುವತ್ತೂರು ನಿವಾಸಿ ಪ್ರೀತಾ ಅವರು ಶುಕ್ರವಾರ ಕಾಞಂಗಾಡ್ ರೈಲ್ವೇ ನಿಲ್ದಾಣದಲ್ಲಿ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದರು.  ತಕ್ಷಣ ರೈಲ್ವೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರೂ ಹುಡುಕಾಟ ನಡೆಸಿದ್ದರೂ, ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಸೋಮವಾರ ಬೆಳಗ್ಗೆ ಶಾನವಾಸ್ ಬಿದ್ದು ಸಿಕ್ಕಿದ ಚಿನ್ನವನ್ನು ಕಾಸರಗೋಡು ರೈಲ್ವೇ ಪೆÇಲೀಸ್ ಠಾಣೆಗೆ ತಲುಪಿಸಿದ್ದಾರೆ. ಪ್ರೀತಾ ಅವರನ್ನು ಠಾಣೆಗೆ ಕರೆಸಿ, ಚಿನ್ನವನ್ನು ಅವರಿಗೆ ಹಸ್ತಾಂತರಿಸಲಾಗಿದೆ.  ರೈಲ್ವೆ ಪೊಲೀಸ್ ಠಾಣೆ ಎಸ್.ಐ ಎಂ.ವಿ.ಪ್ರಕಾಶ್, ಎಸಿಪಿಒಪಿ ಪಿ.ಪಿ.ಅಜಯನ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries