HEALTH TIPS

ಚೆನ್ನೈ ಪ್ರಯಾಣ ಇನ್ನಷ್ಟು ನಿಕಟ: ಚೆನ್ನೈ-ನಾಗರಕೋವಿಲ್ ವಂದೇ ಭಾರತ್ ಶೀಘ್ರ

             ತಿರುವನಂತಪುರಂ: ವಂದೇ ಭಾರತ್ ರೈಲು ಸೇವೆ ಕೇರಳದಲ್ಲಿ ಜನಪ್ರಿಯವಾಗಿದ್ದು ಯಶಸ್ವಿಯಾಗಿ ಸಂಚಾರ ಮುಂದುವರಿದಿದೆ. ಈ ಮಧ್ಯೆ ಚೆನ್ನೈ-ನಾಗರಕೋವಿಲ್ ಮಾರ್ಗದಲ್ಲಿ ಮೊಂದು ವಂದೇ ಭಾರತ್ ಬರಲಿದೆ. ಇದು ತಿರುವನಂತಪುರಕ್ಕೆ ಪ್ರಯಾಣದ ಸಮಯವನ್ನು ಕಡಮೆ ಮಾಡಲಿದೆ. 

               ಚೆನ್ನೈ ಸೆಂಟ್ರಲ್-ನಾಗರ್‍ಕೋಯಿಲ್ ಜಂಕ್ಷನ್ ವಂದೇ ಭಾರತ್ ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಸೇವೆಯು ಚೆನ್ನೈ ಸೆಂಟ್ರಲ್‍ನಿಂದ ಬೆಳಿಗ್ಗೆ 4.15 ಕ್ಕೆ ಹೊರಡುತ್ತದೆ ಮತ್ತು ಮಧ್ಯಾಹ್ನ 1.50 ಕ್ಕೆ ನಾಗರ್‍ಕೋಯಿಲ್ ತಲುಪುತ್ತದೆ. ಮಧ್ಯಾಹ್ನ 2.20ಕ್ಕೆ ನಾಗರ್‍ಕೋಯಿಲ್‍ನಿಂದ ಮರಳಲಿದೆ.  ಮಧ್ಯಾಹ್ನ 12.05ಕ್ಕೆ ಚೆನ್ನೈ ತಲುಪಲಿದೆ.

               ವಂದೇ ಭಾರತ್ ರೈಲು 724 ಕಿಮೀ ಪ್ರಯಾಣವನ್ನು 9.30 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ. ಇತರ ರೈಲುಗಳು ಚೆನ್ನೈನಿಂದ ನಾಗರ್‍ಕೋಯಿಲ್‍ಗೆ ತಲುಪಲು 11 ರಿಂದ 13 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದ ಮುಕ್ಕಾಲು ಗಂಟೆಯ ಸಮಯವನ್ನು ಉಳಿಸಬಹುದು. ಇತ್ತೀಚೆಗೆ ರೈಲಿನ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries