HEALTH TIPS

ಸ್ನೇಹಿತರ ಜೊತೆ ಎಚ್ಚರದಿಂದಿರಿ: ಪೋಲೀಸರಿಗೆ ಮುಖ್ಯಮಂತ್ರಿ ಸಲಹೆ

               ತ್ರಿಶೂರ್: ನೀವು ಯಾರೊಂದಿಗೆ ಸ್ನೇಹಿತರಾಗಿರಬೇಕು ಮತ್ತು ಯಾರೊಂದಿಗೆ ಅಲ್ಲ ಎಂಬುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ. 

             ರಾಮವರ್ಮಪುರಂ ಪೋಲೀಸ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿದ 448 ಸಿಬ್ಬಂದಿಗಳ ಪಾಸಿಂಗ್ ಔಟ್ ಪರೇಡ್‍ನಲ್ಲಿ ಗೌರವ ವಂದನೆ ಸ್ವೀಕರಿಸಿದ ನಂತರ ಮುಖ್ಯಮಂತ್ರಿಗಳು ಮಾತನಾಡಿದರು.

           ಮಾಡಬೇಕಾದುದು ಮತ್ತು ಮಾಡಬಾರದ ವಿಷಯಗಳ ಬಗ್ಗೆ ತಿಳಿಯಿರಿ. ದೂರುಗಳೊಂದಿಗೆ ಠಾಣೆಗೆ ಬರುವವರು ಪರಿಹಾgದ ವಿಶ್ವಾಸದಿಂದ ಹಿಂತಿರುಗಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

          ಕೇರಳ ಪೋಲೀಸ್ ಜನರ ಶಕ್ತಿಯಾಗಿ ಮಾರ್ಪಟ್ಟಿದೆ. ತರಬೇತಿ ಮುಗಿಸಿದವರು ಅದರ ಮುಖಗಳಾಗಬೇಕು. ಮಹಿಳಾ ಬೆಟಾಲಿಯನ್ ಪೋಲೀಸ್ ಪಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪ್ರಜ್ಞಾಪೂರ್ವಕ ಪ್ರಯತ್ನದ ಭಾಗವಾಗಿದೆ. ಪೋಲೀಸ್ ಪಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳಲಾಗುವುದು. ಅವರಿಗೆ ಸೇನೆಯಲ್ಲೂ ಉತ್ತಮ ಅವಕಾಶಗಳನ್ನು ನೀಡಲಾಗುವುದು ಎಂದರು.

               ಹಿಂದಿನ ಸರ್ಕಾರದ ಅವಧಿಯಲ್ಲಿ 1,308 ಮಹಿಳೆಯರನ್ನು ಪೋಲೀಸ್ ಪಡೆಗಳಿಗೆ ಸೇರಿಸಿಕೊಳ್ಳಲಾಗಿತ್ತು. ಈ ಸರ್ಕಾರ ಇದುವರೆಗೆ 1,213 ಮಹಿಳೆಯರನ್ನು ಪಡೆಗೆ ನೇಮಿಸಿದೆ. ಉತ್ತಮ ತರಬೇತಿಯು ಸಾರ್ವಜನಿಕರ ವರ್ತನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

           ಕೇರಳ ಸಶಸ್ತ್ರ ಪೆÇಲೀಸ್ ಬೆಟಾಲಿಯನ್ ನ 290 ಮಹಿಳೆಯರು ಮತ್ತು ಕೆ.ಎ.ಪಿ. 5 ನೇ ಬೆಟಾಲಿಯನ್‍ನ 158 ಪುರುಷರು ಪಡೆಯ ಭಾಗವಾಗಿದ್ದರು. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸುರಕ್ಷಾ ಅಧಿನಿಯಂನಲ್ಲಿ ಜುಲೈ 1 ರಿಂದ ಜಾರಿಗೆ ಬರಲಿರುವ ಮೊದಲ ಪೋಲೀಸ್ ಕಾನ್ಸ್‍ಟೇಬಲ್ ಬ್ಯಾಚ್ ಇದಾಗಿದೆ.

              ಮೇಯರ್ ಎಂ.ಕೆ. ವರ್ಗೀಸ್, ಶಾಸಕ ಪಿ. ಬಾಲಚಂದ್ರನ್, ರಾಜ್ಯ ಪೊಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್, ಸಶಸ್ತ್ರ ಪೋಲೀಸ್ ಬೆಟಾಲಿಯನ್ ಎ.ಡಿ.ಜಿ.ಪಿ. ಎಂ.ಆರ್. ಅಜಿತ್ ಕುಮಾರ್, ಎಡಿಜಿಪಿ ಹಾಗೂ ಕೇರಳ ಪೋಲೀಸ್ ಅಕಾಡೆಮಿ ನಿರ್ದೇಶಕ ಪಿ.ವಿಜಯನ್ ಮತ್ತಿತರರು ಪಾಸಿಂಗ್ ಔಟ್ ಪರೇಡ್ ನಲ್ಲಿ ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries