HEALTH TIPS

ಅಂತಾರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ

       

                   ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಯುವ ಸಂಘ ಕಾಸರಗೋಡು ಆಯೋಜಿಸಿದ ಅಂತಾರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ  ಕೊಸ್ಮೋಸ್ ಇಂಡೋರ್ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಜರಗಿತು. ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆಯಲ್ಲಿ ಉದ್ಯಮಿ ಬಾಲಚಂದ್ರ ಕುಂಬ್ಳೆ ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಸಂಘದ ಮಾಜಿ ಕಾರ್ಯದರ್ಶಿ ಲೋಕೇಶ್ ಅಣಂಗೂರು, ಕೂಡ್ಲು ಉಪಸಂಘದ ಅಧ್ಯಕ್ಷ ಬಿ.ಸತೀಶ್ ಕೂಡ್ಲು ಶುಭ ಹಾರೈಸಿದರು. 

             ಜಿಲ್ಲಾ ಮಹಿಳಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಗೌರವ ಕಾರ್ಯದರ್ಶಿ ಉಷಾಕಿರಣ್, ಅಣಂಗೂರು ಉಪಸಂಘದ ಅಧ್ಯಕ್ಷ ಕಮಲಾಕ್ಷ ಅಣಂಗೂರು, ಬ್ಯಾಂಕ್ ಅಧಿಕಾರಿ ಭವ್ಯಾ, ಬಿ.ಇ.ಎಂ.ಹೈಯರ್ ಸೆಕೆಂಡರಿ ಸ್ಕೂಲ್ ಪ್ರಾಂಶುಪಾಲ ರಾಜೇಶ್ಚಂದ್ರ, ಜಿಲ್ಲಾ ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಉಪಸ್ಥಿತರಿದ್ದರು.

               ಪುರುಷರ ವಿಭಾಗದಲ್ಲಿ ಚಂದ್ರಕಾಂತ ಮತ್ತು ವಿನಯ ಕುಮಾರ್ ಕುಂಬ್ಳೆ ತಂಡ ಪ್ರಥಮ, ಪ್ರತೀಕ್ ಮತ್ತು ವಿಶ್ವಾಸ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಅಕ್ಷತ್ ಮತ್ತು ಮಹೇಶ್ ತೃತೀಯ ಹಾಗು ಭವಿಷ್ ಮತ್ತು ನಿಹಾಲ್ ಚತುರ್ಥ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ನೇಹಾ ಮತ್ತು ದೀಪ್ತಿ ಪ್ರಥಮ, ಸುಧೀಷ್ಣ ಮತ್ತು ಸೀಮಾ ದ್ವಿತೀಯ ಬಹುಮಾನ ಪಡೆದರು. ಸಾತ್ವಿಕ್ ಹಾಗು ವೈಷ್ಣವಿ ಮನ್ನಿಪಾಡಿ ತೃತೀಯ, ಭವ್ಯ ರಾಜೇಶ್ಚಂದ್ರ ಮತ್ತು ಕವಿತಾ ಚತುರ್ಥ ಬಹುಮಾನ ಪಡೆದರು. ಮಹಿಳಾ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ಸೀಮಾ ಲೋಕೇಶ್ ತಂಡವು ತಮಗೆ ಲಭಿಸಿದ ಬಹುಮಾನ ಮೊತ್ತವನ್ನು ವೈದ್ಯಕೀಯ ನೆರವಿಗಾಗಿ ಯುವ ಸಂಘಕ್ಕೆ ಕೊಡುಗೆಯಾಗಿ ನೀಡಿದರು.

              ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಚಂದ್ರಗಿರಿ ಉಪಸಂಘದ ಅಧ್ಯಕ್ಷ ಹರಿಶ್ಚಂದ್ರ ಚಂದ್ರಗಿರಿ, ವಿನಯ್ ಕುಮಾರ್ ಕುಂಬ್ಳೆ, ಲೋಕೇಶ್ ಅಣಂಗೂರು, ಅಕ್ಷತ್ ಮುಂತಾದವರು ಬಹುಮಾನ ವಿತರಿಸಿದರು. ಧನರಾಜ ಕುಂಬ್ಳೆ ಕಾರ್ಯಕ್ರಮ ನಿರ್ವಹಿಸಿದರು. ಲೋಕೇಶ್ ಅಣಂಗೂರು ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries