ಕಾಸರಗೋಡು: ಪೆÇಯಿನಾಚಿಯ 'ಸಕ್ಷಮ' ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿದ್ಯುತ್ ಗಾಲಿಕುರ್ಚಿ ವಿತರಣೆ ಮತ್ತು ಹೆಲೆನ್ ಕೆಲ್ಲರ್ ಸಂಸ್ಮರಣೆ ನಡೆಯಿತು. ಒಂದೂವರೆ ಲಕ್ಷ ರೂ. ಮೌಲ್ಯದ ನಿಯೋ ಬೋಲ್ಟ್ ಎಲೆಕ್ಟ್ರಿಕ್ ಗಾಲಿಕುರ್ಚಿಯನ್ನು ಬಾರ ನಿವಾಸಿ ರಾಮಕೃಷ್ಣನ್ ಅವರಿಗೆ ಹಸ್ತಾಂತರಿಸಲಾಯಿತು.
ಸೊಂಟದಿಂದ ಕೆಳಭಾಗದಲ್ಲಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿರುವ ರಾಮಕೃಷ್ಣನ್ ಅವರು ತಮ್ಮ ನಿವಾಸದಲ್ಲಿ ತಯಾರಿಸುತ್ತಿರುವ ಉಪ್ಪಿನಕಾಯಿ, ಪಪ್ಪಡದಂತಹ ಗೃಹಉತ್ಪನ್ನಗಳೊಂದಿಗೆ ತೆವಳಿಕೊಂಡು ಸಾಗಿ ಮಾರಾಟ ನಡೆಸುತ್ತಿರುವುದನ್ನು ಮನಗಂಡು ಎಲೆಕ್ಟ್ರಿಕಲ್ ಗಾಲಿಕುರ್ಚಿ ಹಸ್ತಾಂತರಿಸಲಾಗಿದೆ.
ಬಟ್ಟತ್ತೂರು ನೆಲ್ಲಿಯಡುಕ್ಕ ಪಾರ್ಥಸಾರಥಿ ದೇವಸ್ಥಾನ ಸೇವಾಮಂದಿರದಲ್ಲಿ ನಡೆದ ಸಮಾರಂಬದಲ್ಲಿ ಜಿಲ್ಲಾ ನಿವೃತ್ತ ಶಿಕ್ಷಣ ಉಪನಿರ್ದೇಶಕ ಎನ್.ನಂದಿಕೇಶನ್ ಉದ್ಘಾಟಿಸಿದರು ಸಕ್ಷಮ ರಾಜ್ಯ ಸಮಿತಿ ಸದಸ್ಯ ಟಿ.ಬಿ.ಹರಿ ಆಲುವಾ ಅವರು ಹೆಲನ್ ಕೆಲ್ಲರ್ ಸಂಸ್ಮರಣೆ ನಡೆಸಿದರು.
ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ (ವಿಕಲಚೇತನ)ಶ್ರೇಯಸ್ ಕೆ ಸತೀಶನ್ ಅವರಿಗೆ ಜಿಲ್ಲಾರಕ್ಷಾಧಿಕಾರಿ ಟಿ.ವಿ ಭಾಸ್ಕರನ್ ವಿತರಿಸಿದರು. ಶ್ರೇಯಸ್ ಕೆ ಸತೀಶನವರು ಉಡುಗೊರೆ ವಿತರಿಸಿದರು. ಸಕ್ಷಮ ರಾಜ್ಯ ಉಪಾಧ್ಯಕ್ಷ ಸಿ.ಸಿ.ಭಾಸ್ಕರನ್ ಸಂಘಟನಾ ಸಂದೇಶ ನೀಡಿದರು.
ಸಕ್ಷಮ ಜಿಲ್ಲಾಧ್ಯಕ್ಷ ಇ.ಕೆ.ರವೀಂದ್ರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಡಾ.ಸುಜಯ ಪಾಂಡಿಯನ್, ಪಾರ್ಥಸಾರಥಿ ದೇವಸ್ಥಾನದ ಟ್ರಸ್ಟಿ ಶ್ರೀ ಸದಾನಂದ ಙÉಕ್ಲಿ, ಜಿಲ್ಲಾ ಉಪಾಧ್ಯಕ್ಷ ರಘುನಾಥ ಕಾಞಂಗಾಡ್, ಗೀತಾ ಬಾಬುರಾಜ್, ರಾಷ್ಟ್ರೀಯ ಸ್ವಯಂ ಸೇವಕ ಸಂಗಮ ಕಾಞಂಗಾಡು ಜಿಲ್ಲಾ ಸೇವಾ ಪ್ರಮುಖ್ ಪಿ.ಕೃಷ್ಣನ್ ಎಚ್ಚಿಕಾನಂ, ಓಮನ ಮುರಳಿ, ನಾಗೇಶ್ ಗಟ್ಟಿ, ಬಾಲನ್ ಮುಂಡಕೈ ಮೊದಲಾದವರು. ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಬಿ.ವೇಣುಗೋಪಾಲನ್ ಸ್ವಾಗತಿಸಿದರು. ಕೋಶಾಧಿಕಾರಿ ರತೀಶ್ ಪಿ.ವಿ.ಪರವನಡ್ಕ ವಂದಿಸಿದರು.