HEALTH TIPS

ರಂಗ ಚಿನ್ನಾರಿ ಮಹಿಳಾ ಘಟಕ ನಾರಿ ಚಿನ್ನಾರಿಯಿಂದ 'ಗೆಜ್ಜೆ ತರಂಗ' ಕಾರ್ಯಕ್ರಮ

              ಕಾಸರಗೋಡು: ಸಾಹಿತ್ಯಿಕ ಸಾಂಸ್ಕøತಿಕ ಸಂಸ್ಥೆ ರಂಗ ಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿ ವತಿಯಿಂದ 'ಗೆಜ್ಜೆ ತರಂಗ' ಕಾರ್ಯಕ್ರಮ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಿತು. 

        ಖ್ಯಾತ ನೃತ್ಯ ಗುರು ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಾಸ್ತ್ರೀಯ ನೃತ್ಯ ಕಲಿಕೆ ಮಾನಸಿಕ ಹಾಗೂ ದೈಹಿಕವಾಗಿ ನಮ್ಮನ್ನು ಗಟ್ಟಿ ಗೊಳಿಸುತ್ತದೆ.  ನಿರಂತರ ಅಭ್ಯಾಸದಿಂದ ಮಾತ್ರ ಸಂಗೀತ ಒಲಿಸಿಕೊಳ್ಳಲು ಸಾಧ್ಯ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ರಂಗ ಚಿನ್ನಾರಿ ಚಿಗುರು ಪ್ರತಿಭೆಯ ಕಲಾವಿದರಿಗೆ ಪ್ರೇರಣಾದಾಯಕ ಹಾಗೂ ಸಮಾಜಕ್ಕೆ ಆದರ್ಶಪ್ರಾಯವಾಘಿರುವುದಾಗಿ ತಿಳಿಸಿದರು.  


          ನೃತ್ಯ ಗುರು ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದರು.  

           ನಾರಿ ಚಿನ್ನಾರಿಯ ಅಧ್ಯಕ್ಷೆ ಸವಿತಾ ಐ. ಭಟ್ ಇವರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಯಶ್ನಾ ಬಿ. ನಾಯ್ಕ್ ಮತ್ತು ಕುಮಾರಿ ಶಾನ್ವಿ ಕೆ. ಅವರಿಂದ ಭರತನಾಟ್ಯ,  ಕುಮಾರಿ ಕೃಷ್ಣಪ್ರಭಾ ಪಿಳ್ಳೈ ಮೋಹಿನಿಯಾಟ್ಟಂ, ಕುಮಾರಿ ದ್ರುವಿತಾ ಸಿ.ಎಸ್ ಅವರಿಂದ ಜಾನಪದ ನೃತ್ಯ, ಕುಮಾರಿ ಕೃಷ್ಣೇಂದು ಅವರಿಂದ ಕೂಚುಪುಡಿ ನೃತ್ಯ, ಕುಮಾರಿ ಶಿವಾನಿ ಕೂಡ್ಲು ಅವರಿಂದ ಕೇರಳ ನಟನಂ ಹಾಗೂ ಕುಮಾರಿ ಗೀತಪ್ರಿಯ ಡಿ. ಮತ್ತು ಕುಮಾರಿ ತೃಷಾ ಕೆ. ಯಕ್ಷಗಾನ ನೃತ್ಯ ಪ್ರದರ್ಶಿಸಿದರು.


          ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ ಕಾರ್ಯಕ್ರಮವು ಕಾಸರಗೋಡಿನ ಪ್ರತಿಭಾನ್ವಿತ ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿತ್ತು. ಈ ಸಂದರ್ಭ ನೃತ್ಯ ಪ್ರತಿಭೆಗಳನ್ನು ಒಗ್ಗೂಡಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಕಿರಣ್ ಪ್ರಸಾದ ಕೂಡ್ಲು ಇವರನ್ನು ಅಭಿವಂದಿಸಲಾಯಿತು. ರಂಗಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಇವರು ನೃತ್ಯ ಗುರುಗಳಾದ ಸುರೇಂದ್ರನ್ ಪಟ್ಟೇನ್ ಮತ್ತು ವಿದುಷಿ ವಿದ್ಯಾಲಕ್ಷ್ಮೀ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನಾರಿ ಚಿನ್ನಾರಿಯ ಪ್ರಧಾನ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಚಿನ್ನಾ ಸ್ವಾಗತಿಸಿದರು. ನಾರಿ ಚಿನ್ನಾರಿಯ ಸೂರ್ಯಕುಮಾರಿ ವಂದಿಸಿದರು.  


 






Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries