HEALTH TIPS

ಬದಿಯಡ್ಕ ರೋಟರಿಯಿಂದ ಕಯ್ಯಾರರ ಜನ್ಮದಿನಾಚರಣೆ

                 ಬದಿಯಡ್ಕ: ರೋಟರಿ ಬದಿಯಡ್ಕದ ವತಿಯಿಂದ ರಾಷ್ಟ್ರಕವಿ ಕಯ್ಯಾರ ಕಿಞ್ಞಣ್ಣ ರೈ ಯವರ 109 ನೇ ಜನ್ಮದಿನಾಚರಣೆಯನ್ನು ಬದಿಯಡ್ಕದ ಸಮೀಪ ಕಲ್ಲಕಳಯದ ಅವರ ಸುಪುತ್ರ ಕೃಷ್ಣ ಪ್ರದೀಪ್‍ರವರ ನಿವಾಸದಲ್ಲಿ ಆಚರಿಸಲಾಯಿತು. 

              ರೋಟರಿ ಬದಿಯಡ್ಕದ ಅಧ್ಯಕ್ಷ ಬಿ ರಾಧಾಕೃಷ್ಣ ಪೈಯವರು ದೀಪ ಬೆಳಗಿಸಿ ಕವಿ ಕಯ್ಯಾರರ ಭಾವಚಿತ್ರಕ್ಕೆ ಹೂವಿನ ಹಾರವನ್ನು ಹಾಕಿ ಪುಷ್ಪಾರ್ಚನೆಯನ್ನು ಸಲ್ಲಿಸಿ ಮಾತನಾಡಿ ಬದಿಯಡ್ಕ ಮೇಲಿನ ಪೇಟೆಯ ವೃತ್ತಕ್ಕೆ ರಾಷ್ಟ್ರಕವಿ ಕಯ್ಯಾರ ಕಿಞ್ಞಣ್ಣ ರೈ ವೃತ್ತ ಎಂಬುದಾಗಿ ನಾಮಕರಣಕ್ಕಾಗಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮನವಿಯನ್ನು ಸಲ್ಲಿಸಿದ ವಿವರವನ್ನು ಸಭೆಯ ಅವಗಾಹನೆಗೆ ತಂದರು. 

            ರೋಟರಿ ಬದಿಯಡ್ಕದ ಸದಸ್ಯರು ಭಾಗವಹಿಸಿದ್ದರು. ಯುವ ಉದ್ಯಮಿ ರೊಟೇರಿಯನ್ ಪ್ರತಿಕ್ ಆಳ್ವಾ ಪೆರಡಾಲ ನೇತೃತ್ವ ವಹಿಸಿದ್ದರು. ಕಾರ್ಯದರ್ಶಿ ವೈ.ರಾಘವೇಂದ್ರ ಪ್ರಸಾದ್ ನಾಯಕ್ ಕವಿ ಕಯ್ಯಾರರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಗೈದ ಕೊಡುಗೆಗಳನ್ನು ನೆನಪಿಸಿ ಕವಿ ಕಯ್ಯಾರರಿಗೆ ಗೌರವ ನಮನಗಳನ್ನು ಅರ್ಪಿಸಿ ವಂದಿಸಿದರು. ಆರತಿ ಪ್ರದೀಪ್ ರೈ ಸಹಕರಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries