ಬದಿಯಡ್ಕ: ಪೆರಡಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಪ್ರವೇಶೋತ್ಸವ ಕಾರ್ಯಕ್ರಮವನ್ನು ಬದಿಯಡ್ಕ ಸಿವಿಲ್ ಅಬಕಾರಿ ಅಧಿಕಾರಿ ಜನಾರ್ದನ ಎನ್. ಉದ್ಘಾಟಿಸಿ ನವಾಗತ ಮಕ್ಕಳಿಗೆ ಶುಭಾಶಯ ಕೋರಿ ಶಾಲಾ ಜೀವನದ ಮಹತ್ವ ವಿವರಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸದಸ್ಯ ನಿಝಾರ್ ಶುಭಕೋರಿದರು. ಈ ಸಂದರ್ಭದಲ್ಲಿ ಗತ ವರ್ಷ ಎಲ್.ಎಲ್.ಎಸ್ ಸ್ಕಾಲರ್ಶಿಪ್ ವಿಜೇತರಾದ ಕ್ರಿಸ್ಟಿ ಥಾಮಸ್ ಅವರನ್ನು ಶಾಲಾ ವತಿಯಿಂದ ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಕರಾಟೆ ವಿಜೇತೆ ಅನಾಮಿಕ ಎ.ಎಂ. ಅವರನ್ನು ಗೌರವಿಸಲಾಯಿತು. ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
ಹಿರಿಯ ಶಿಕ್ಷಕಿ ಚಂದ್ರಾವತಿ, ಶಾಲಾ ಸಂಪನ್ಮೂಲ ಗುಂಪಿನ ಸಂಚಾಲಕ ಜಯಕೃಷ್ಣನ್, ಶ್ರೀಧರ ಭಟ್, ಆಯಿಶತ್ ಬುಶರಾ ಶುಭಾಶಂಶನೆಗೈದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಬೀನಾ ಅವರು ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ರಿμÁದ್ ಪಿಎಂಎ ವಂದಿಸಿದರು. ರಂಜಿತ್ ಕಾರ್ಯಕ್ರಮ ನಿರೂಪಿಸಿದರು . ಬಳಿಕ ರಕ್ಷಕರಿಗಾಗಿ ವಿಶೇಷ ತರಗತಿಯನ್ನು ಶಿಕ್ಷಕ ರಂಜಿತ್ ನಡೆಸಿದರು.ಸಿಹಿತಿಂಡಿ ವಿತರಿಸಲಾಯಿತು.