HEALTH TIPS

ಡಾ.ವಂದನಾ ದಾಸ್ ಹತ್ಯೆ ಪ್ರಕರಣ: ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್

             ತಿರುವನಂತಪುರಂ: ಡಾ.ವಂದನಾ ದಾಸ್ ಹತ್ಯೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

               ನಾಳೆಯ ಚಾರ್ಜ್ ಶೀಟ್ ಓದುವಿಕೆಯನ್ನು ಮುಂದೂಡಲಾಗಿದೆ. ಡಿಸ್ಚಾರ್ಜ್ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಹೈಕೋರ್ಟ್‍ನ ತಾತ್ಕಾಲಿಕ ಆದೇಶ ಬಂದಿದೆ.

                ಕಳೆದ ವಾರ ಡಾ. ವಂದನಾ ದಾಸ್ ಹತ್ಯೆ ಪ್ರಕರಣದ ಆರೋಪಿ ಸಂದೀಪ್ ಸಲ್ಲಿಸಿದ್ದ ಬಿಡುಗಡೆ ಅರ್ಜಿಯನ್ನು ಕೊಲ್ಲಂನ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಆರೋಪಿ ವಿಚಾರಣೆ ಎದುರಿಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಪೋಲೀಸರು ಎತ್ತಿರುವ ಕೊಲೆಯ ಆರೋಪವು ಸಾಕಾಗುತ್ತದೆ ಎಂದು ನ್ಯಾಯಾಲಯವು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಸಂದೀಪ್ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ಬದ್ರುದ್ದೀನ್ ಅವರಿದ್ದ ಏಕಸದಸ್ಯ ಪೀಠವು ಸದ್ಯಕ್ಕೆ ವಿಚಾರಣೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಪ್ರಕರಣದ ಡೈರಿಯನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪೋಲೀಸರಿಗೆ ಸೂಚಿಸಿದೆ.

              ನಾಳೆ, ವಿಚಾರಣೆಯ ಪ್ರಕ್ರಿಯೆಯ ಪ್ರಾರಂಭವಾಗಿ, ಆರೋಪಿಗೆ ಚಾರ್ಜ್ ಶೀಟ್ ಅನ್ನು ಓದಲು ತೀರ್ಮಾನಿಸಲಾಗಿತ್ತು. ಸದ್ಯಕ್ಕೆ ನ್ಯಾಯಾಲಯ ಇಂತಹ ಕ್ರಮಗಳಿಗೆ ತಡೆ ನೀಡಿದೆ. ಪೋಲೀಸರ ಕೇಸ್ ಡೈರಿಯನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಸಲ್ಲಿಸಿರುವ ಅರ್ಜಿಯಲ್ಲಿ ಅವರ ಮೇಲಿನ ಆರೋಪ ಕೊಲೆಯೋ ಅಥವಾ ನರಹತ್ಯೆಯೋ ಎಂಬ ಗೊಂದಲವಿದ್ದು, ಸ್ಪಷ್ಟನೆ ನೀಡಬೇಕಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries