ಕಾಸರಗೋಡು: ನಗರದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಪ್ರತಿμÁ್ಠ ವಾರ್ಷಿಕೋತ್ಸವವು ದಿನಾಂಕ 15.6.2924 ರಂದು ಜರಗಿತು. ಈ ಸಂಧರ್ಭದಲ್ಲಿ 2024 ಡಿಸಂಬರ್ 11 ರಿಂದ 15 ರ ತನಕ ನಡೆಯಲಿರುವ “ಶ್ರೀ ಅಯ್ಯಪ್ಪ ದೇವರ ಶಿಲಾಮಯ ಪಾಣಿಪೀಠ ನೂತನ ರಜತ ಛಾಯಾಚಿತ್ರ ಪ್ರತಿμÉ್ಠ ಹಾಗೂ 59 ನೇ ಶಬರಿಮಲೆ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ” ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಶ್ರೀ ಧರ್ಮಶಾಸ್ತಾ ಸೇವಾ ಸಂಘ (ರಿ) ಇದರ ಅಧ್ಯಕ್ಷ ಸುರೇಶ್ (ಕೃಷ್ಣ ಹಾಡ್ರ್ವವೇರ್ಸ್), ಕಾರ್ಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಸುರೇಶ್ ಸುವರ್ಣ, ಕೋಶಾಧಿಕಾರಿ ಅನಂತರಾಜ್, ಜೊತೆ ಕಾರ್ಯದರ್ಶಿಗಳಾದ ಮಹೇಶ್ ನೆಲ್ಲಿಕುಂಜೆ, ಧನಂಜಯ, ಸಮಿತಿ ಸದಸ್ಯರು ಹಾಗೂ ಗುರುಸ್ವಾಮಿಗಳಾದ ಬಾಲಕೃಷ್ಣ, ಕರುಣಾಕರ, ಬಿ. ಭವಾನಿಶಂಕರ್, ಪುರುಷೋತ್ತಮ, ಕುಂಞ್ಞಕೃಷ್ಣ ಭಕ್ತಾದಿಗಳಾದ ಸಂತೋಷ್ ಭಂಡಾರಿ, ಕಿಶೋರ್ ಕುಮಾರ್, ತುಕಾರಾಮ ಆಚಾರ್ಯ ಕೆರೆಮನೆ ಮುಂತಾದವರು ಉಪಸ್ಥಿತರಿದ್ದರು.